عَنِ الحُسَينِ بنِ عَلِيٍّ بنِ أَبِي طَالِبٍ رضي الله عنهما قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«الْبَخِيلُ مَنْ ذُكِرْتُ عِنْدَهُ فَلَمْ يُصَلِّ عَلَيَّ».
[صحيح] - [رواه الترمذي والنسائي في الكبرى وأحمد] - [السنن الكبرى للنسائي: 8046]
المزيــد ...
ಹುಸೈನ್ ಬಿನ್ ಅಲಿ ಬಿನ್ ಅಬೂತಾಲಿಬ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರ ಬಳಿ ನನ್ನ ಹೆಸರು ಹೇಳಲಾಗಿಯೂ ನನ್ನ ಮೇಲೆ ಸಲಾತ್ ಹೇಳುವುದಿಲ್ಲವೋ ಅವನೇ ನಿಜವಾದ ಜಿಪುಣ."
[صحيح] - - [السنن الكبرى للنسائي - 8046]
ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಸರು, ಉಪನಾಮ ಅಥವಾ ವಿವರಣೆಯನ್ನು ಕೇಳುವಾಗ ಅವರ ಮೇಲೆ ಸಲಾತ್ ಹೇಳದವರಿಗೆ ಅವರು ಇಲ್ಲಿ ಎಚ್ಚರಿಕೆ ನೀಡಿದ್ದಾರೆ. ಅವರು ಹೇಳಿದರು: "ಪೂರ್ಣರೂಪದ ಜಿಪುಣ ಯಾರೆಂದರೆ ನನ್ನ ಹೆಸರು ಕೇಳಿಯೂ ನನ್ನ ಮೇಲೆ ಸಲಾತ್ ಹೇಳದವರು." ಇದಕ್ಕೆ ಕೆಲವು ಕಾರಣಗಳಿವೆ:
ಒಂದು: ತನಗೆ ಯಾವುದೇ ರೀತಿಯಲ್ಲೂ ಕನಿಷ್ಠ ಅಥವಾ ಗರಿಷ್ಠ ನಷ್ಟ ಉಂಟು ಮಾಡದ ಮತ್ತು ತಾನು ಸಂಪತ್ತನ್ನೋ ಶಕ್ತಿಯನ್ನೋ ವ್ಯಯಿಸಬೇಕಾಗಿಲ್ಲದ ಒಂದು ವಿಷಯದ ಬಗ್ಗೆ ಅವನು ಜಿಪುಣತನ ತೋರಿದ್ದಾನೆ.
ಎರಡು: ಅವನು ತನ್ನ ಆತ್ಮದೊಂದಿಗೆ ಜಿಪುಣತನ ತೋರಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳಿದ್ದಕ್ಕೆ ದೊರೆಯುವ ಪ್ರತಿಫಲದಿಂದ ತನ್ನನ್ನು ವಂಚಿತಗೊಳಿಸಿದ್ದಾನೆ. ಏಕೆಂದರೆ, ಅವನು ಸಲಾತ್ ಹೇಳುವುದನ್ನು ನಿರಾಕರಿಸುವ ಮೂಲಕ ಜಿಪುಣತನ ತೋರಿದ್ದಾನೆ ಮತ್ತು ಸಲಾತ್ ಹೇಳಬೇಕೆಂದು ತನಗೆ ಆಜ್ಞಾಪಿಸಲಾದ ಆಜ್ಞೆಯನ್ನು ಪಾಲಿಸಲು ಮತ್ತು ಅದರ ಮೂಲಕ ಪ್ರತಿಫಲವನ್ನು ಪಡೆಯಲು ನಿರಾಕರಿಸಿದ್ದಾನೆ.
ಮೂರು: ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ಸಲಾತ್ ಹೇಳುವುದು ಎಂದರೆ ಅವರ ಹಕ್ಕನ್ನು ನೆರವೇರಿಸುವುದಾಗಿದೆ. ಏಕೆಂದರೆ, ಅವರೇ ನಮಗೆ ಕಲಿಸಿಕೊಟ್ಟವರು, ನಮಗೆ ಮಾರ್ಗದರ್ಶನ ಮಾಡಿದವರು, ನಮ್ಮನ್ನು ಅಲ್ಲಾಹನ ಕಡೆಗೆ ಆಮಂತ್ರಿಸಿದವರು ಮತ್ತು ನಮ್ಮ ಬಳಿಗೆ ದೇವವಾಣಿ ಮತ್ತು ಧರ್ಮಶಾಸ್ತ್ರವನ್ನು ತಂದುಕೊಟ್ಟವರು. ನಾವು ಸನ್ಮಾರ್ಗದಲ್ಲಿರಲು ಅಲ್ಲಾಹನ ನಂತರ ಅವರೇ ಕಾರಣಕರ್ತರು. ಅವರ ಮೇಲೆ ಸಲಾತ್ ಹೇಳದವನು ಸ್ವತಃ ತನ್ನ ಆತ್ಮದೊಂದಿಗೆ ಜಿಪುಣತನ ತೋರಿದ್ದಾನೆ ಮತ್ತು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತ್ಯಂತ ಸರಳ ಹಕ್ಕುಗಳಲ್ಲಿ ಒಂದನ್ನು ನೆರವೇರಿಸಲು ಜಿಪುಣತನ ತೋರಿದ್ದಾನೆ.