+ -

عن أَبِي أُمَامَةَ إِياسِ بنِ ثَعْلَبَةَ الحَارِثِيِّ رضي الله عنه أَنَّ رَسُولَ اللهِ صَلَّى اللهُ عَلَيْهِ وَسَلَّمَ قَالَ:
«مَنِ اقْتَطَعَ حَقَّ امْرِئٍ مُسْلِمٍ بِيَمِينِهِ، فَقَدْ أَوْجَبَ اللهُ لَهُ النَّارَ، وَحَرَّمَ عَلَيْهِ الْجَنَّةَ» فَقَالَ لَهُ رَجُلٌ: وَإِنْ كَانَ شَيْئًا يَسِيرًا يَا رَسُولَ اللهِ؟ قَالَ: «وَإِنْ قَضِيبًا مِنْ أَرَاكٍ».

[صحيح] - [رواه مسلم] - [صحيح مسلم: 137]
المزيــد ...

ಅಬೂ ಉಮಾಮ ಇಯಾಸ್ ಬಿನ್ ಸಅಲಬ ಅಲ್-ಹಾರಿಸಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು ಆಣೆ ಹಾಕಿ ಒಬ್ಬ ಮುಸಲ್ಮಾನನ ಹಕ್ಕನ್ನು ಕಸಿದುಕೊಳ್ಳುತ್ತಾನೋ, ಅಲ್ಲಾಹು ಅವನಿಗೆ ನರಕವನ್ನು ಕಡ್ಡಾಯಗೊಳಿಸುತ್ತಾನೆ ಮತ್ತು ಸ್ವರ್ಗವನ್ನು ನಿಷಿದ್ಧಗೊಳಿಸುತ್ತಾನೆ." ಆಗ ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ಅದು ಅಲ್ಪ ಪ್ರಮಾಣದ್ದಾಗಿದ್ದರೂ ಸಹ?" ಅವರು ಹೇಳಿದರು: "ಹೌದು, ಅದು ಅರಾಕ್ ಮರದ ಒಂದು ಸಣ್ಣ ಕಡ್ಡಿಯಾಗಿದ್ದರೂ ಸಹ."

[صحيح] - [رواه مسلم] - [صحيح مسلم - 137]

ವಿವರಣೆ

ತಿಳಿದೂ ಸಹ ಸುಳ್ಳು ಆಣೆ ಮಾಡುವುದರ ವಿರುದ್ಧ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದ್ದಾರೆ. ಅದೇಕೆಂದರೆ ಅದು ಒಬ್ಬ ಮುಸಲ್ಮಾನನ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ಕಾರಣವಾಗುತ್ತದೆ. ನರಕಕ್ಕೆ ಅರ್ಹನಾಗುವುದು ಮತ್ತು ಸ್ವರ್ಗದಿಂದ ವಂಚಿತನಾಗುವುದು ಅದಕ್ಕಿರುವ ಪ್ರತಿಫಲವಾಗಿದೆ. ಅಷ್ಟೇ ಅಲ್ಲದೆ, ಅದು ಮಹಾಪಾಪಗಳಲ್ಲಿ ಒಂದಾಗಿದೆ. ಆಗ ಒಬ್ಬ ವ್ಯಕ್ತಿ ಕೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ಆಣೆ ಮಾಡಲಾದ ವಿಷಯವು ಸಣ್ಣ ಪ್ರಮಾಣದ್ದಾಗಿದ್ದರೂ ಸಹ (ಇದೇ ಶಿಕ್ಷೆ ನೀಡಲಾಗುವುದೇ)? ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಹೌದು, ಅದು ಅರಾಕ್ ಮರದಿಂದ ತೆಗೆದ ಸಣ್ಣ ಮಿಸ್ವಾಕ್ ಕಡ್ಡಿಯಾಗಿದ್ದರೂ ಸಹ.

ಹದೀಸಿನ ಪ್ರಯೋಜನಗಳು

  1. ಇತರರ ಹಕ್ಕುಗಳನ್ನು ಕಸಿದುಕೊಳ್ಳುವುದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಅದು ಎಷ್ಟೇ ಸಣ್ಣದಾಗಿದ್ದರೂ ಅದನ್ನು ಅದರ ಮಾಲೀಕರಿಗೆ ಹಿಂದಿರುಗಿಸಲು ಪ್ರೋತ್ಸಾಹಿಸಲಾಗಿದೆ. ನ್ಯಾಯಾಧೀಶರು ತಪ್ಪಾಗಿ ತೀರ್ಪು ನೀಡಿದರೂ ಸಹ ಅದು ಒಬ್ಬನಿಗೆ ಸೇರದಿರುವ ವಸ್ತುವನ್ನು ಅವನಿಗೆ ಅನುಮತಿಸುವುದಿಲ್ಲ.
  2. ಇಮಾಮ್ ನವವಿ ಹೇಳುತ್ತಾರೆ: "ಮುಸ್ಲಿಮರ ಹಕ್ಕುಗಳ ಉಲ್ಲಂಘನೆಯನ್ನು ಬಹಳ ಗಂಭೀರವಾಗಿ ನಿಷೇಧಿಸಲಾಗಿದೆ. ಹಕ್ಕು ಕಡಿಮೆಯಾಗಿರಲಿ ಅಥವಾ ಹೆಚ್ಚಾಗಿರಲಿ ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅದು ಅರಾಕ್ ಮರದ ಒಂದು ಸಣ್ಣ ಕಡ್ಡಿಯಾಗಿದ್ದರೂ ಸಹ."
  3. ಇಮಾಮ್ ನವವಿ ಹೇಳುತ್ತಾರೆ: "ಈ ಶಿಕ್ಷೆಯು ಮುಸಲ್ಮಾನನ ಹಕ್ಕನ್ನು ಕಸಿದುಕೊಂಡು ಪಶ್ಚಾತ್ತಾಪ ಪಡುವ ಮೊದಲು ಮರಣಹೊಂದುವವನಿಗೆ ಅನ್ವಯವಾಗುತ್ತದೆ. ಆದರೆ ಪಶ್ಚಾತ್ತಾಪ ಪಟ್ಟು, ತನ್ನ ತಪ್ಪಿಗೆ ವಿಷಾದಿಸಿ, ಹಕ್ಕನ್ನು ಅದರ ಮಾಲೀಕನಿಗೆ ಹಿಂದಿರುಗಿಸಿ, ಅವನಿಂದ ಕ್ಷಮೆಯನ್ನು ಪಡೆದು ಮತ್ತೆಂದಿಗೂ ಹಾಗೆ ಮಾಡುವುದಿಲ್ಲ ಎಂದು ನಿರ್ಧರಿಸಿದವನು ಪಾಪದಿಂದ ಮುಕ್ತನಾಗುತ್ತಾನೆ."
  4. ಖಾದಿ ಹೇಳುತ್ತಾರೆ: "ಇಲ್ಲಿ ಮುಸ್ಲಿಮರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿರುವುದು ಏಕೆಂದರೆ ಅವರನ್ನೇ ಇಲ್ಲಿ ಸಂಬೋಧಿಸಲಾಗಿದೆ ಮತ್ತು ಶರೀಅತ್‌ನಲ್ಲಿ ಸಾಮಾನ್ಯವಾಗಿ ವ್ಯವಹರಿಸುವವರು ಅವರೇ ಆಗಿದ್ದಾರೆ. ಮುಸ್ಲಿಮೇತರರ ವಿಷಯದಲ್ಲಿ ಇದು ಅನ್ವಯವಾಗುವುದಿಲ್ಲ ಎಂದು ಇದರ ಅರ್ಥವಲ್ಲ. ಬದಲಿಗೆ, ಅವರ ವಿಷಯದಲ್ಲೂ ಅದೇ ನಿಯಮವು ಅನ್ವಯಿಸುತ್ತದೆ."
  5. ಇಮಾಮ್ ನವವಿ ಹೇಳುತ್ತಾರೆ: "ಸುಳ್ಳು ಎಂದರೆ ಒಂದು ವಿಷಯದ ಬಗ್ಗೆ ಅದು ನಿಜಸ್ಥಿತಿಗೆ ವಿರುದ್ಧವಾಗಿ ತಿಳಿಸುವುದು. ತಿಳಿಸುವುದು ಉದ್ದೇಶಪೂರ್ವಕವಾಗಿರಬಹುದು ಅಥವಾ ಉದ್ದೇಶಪೂರ್ವಕವಲ್ಲದಿರಬಹುದು. ಹಾಗೆಯೇ ಅದು ಭೂತಕಾಲಕ್ಕೆ ಸಂಬಂಧಿಸಿ ತಿಳಿಸಿದ್ದಾಗಿರಬಹುದು ಅಥವಾ ಭವಿಷ್ಯಕ್ಕೆ ಸಂಬಂಧಿಸಿ ತಿಳಿಸಿದ್ದಾಗಿರಬಹುದು."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ الأسامية السويدية الأمهرية الهولندية الغوجاراتية الدرية الرومانية المجرية الموري المالاجاشية الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು