عَنْ أَبِي هُرَيْرَةَ رضي الله عنه قَالَ: إِنَّ رَسُولَ اللهِ صلى الله عليه وسلم قَالَ:
«إِذَا شَرِبَ الْكَلْبُ فِي إِنَاءِ أَحَدِكُمْ فَلْيَغْسِلْهُ سَبْعًا». ولمسلم: « أولاهُنَّ بالتُراب».

[صحيح] - [متفق عليه] - [صحيح البخاري: 172]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಾಯಿ ನಿಮ್ಮಲ್ಲೊಬ್ಬರ ಪಾತ್ರೆಯಲ್ಲಿ ಕುಡಿದರೆ, ಅವನು ಅದನ್ನು ಏಳು ಬಾರಿ ತೊಳೆಯಬೇಕಾಗಿದೆ." ಮುಸ್ಲಿಂರ ವರದಿಯಲ್ಲಿ ಹೀಗಿದೆ: "ಅದರಲ್ಲಿ ಮೊದಲನೆಯ ಬಾರಿ ಮಣ್ಣಿನಿಂದ."

[صحيح] - [متفق عليه] - [صحيح البخاري - 172]

ವಿವರಣೆ

ಪಾತ್ರೆಯೊಳಗೆ ನಾಯಿ ನಾಲಗೆಯನ್ನು ತೂರಿಸಿದರೆ, ಆ ಪಾತ್ರೆಯನ್ನು ಏಳು ಬಾರಿ ತೊಳೆಯಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಜ್ಞಾಪಿಸಿದ್ದಾರೆ. ಮೊದಲನೆಯ ಬಾರಿ ತೊಳೆಯುವಾಗ ಮಣ್ಣನ್ನು ಸೇರಿಸಬೇಕು. ನಂತರ ನೀರಿನಿಂದ ಶುಚೀಕರಿಸಬೇಕು. ಇದರಿಂದ ಆ ಅಶುದ್ಧಿಯು ಮತ್ತು ಅದರಿಂದ ಉಂಟಾಗುವ ಹಾನಿಯು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಹದೀಸಿನ ಪ್ರಯೋಜನಗಳು

  1. ನಾಯಿಯ ಜೊಲ್ಲು ತೀವ್ರಸ್ವರೂಪದ ಅಶುದ್ಧಿಯಾಗಿದೆ.
  2. ನಾಯಿ ಪಾತ್ರೆಯನ್ನು ನೆಕ್ಕಿದರೆ, ಆ ಪಾತ್ರೆ ಮತ್ತು ಅದರಲ್ಲಿರುವ ನೀರು ಅಶುದ್ಧವಾಗುತ್ತದೆ.
  3. ಮಣ್ಣಿನ ಮೂಲಕ ಮತ್ತು ಏಳು ಬಾರಿ ಪುನರಾವರ್ತಿಸಿ ತೊಳೆಯುವ ಮೂಲಕ ಶುದ್ಧೀಕರಿಸಬೇಕೆಂದು ಹೇಳಿರುವುದು ಕೇವಲ ನಾಯಿ ನೆಕ್ಕಿರುವುದನ್ನು ಶುದ್ಧೀಕರಿಸಲು ಮಾತ್ರ. ಅದರ ಮಲ-ಮೂತ್ರ ತಾಗಿದರೆ, ಅಥವಾ ನಾಯಿ ಅಶುದ್ಧಗೊಳಿಸಿರುವುದನ್ನು ಶುದ್ಧೀಕರಿಸಲು ಹೀಗೆ ಮಾಡಬೇಕಾಗಿಲ್ಲ.
  4. ಮಣ್ಣು ಬಳಸಿ ಪಾತ್ರೆಯನ್ನು ತೊಳೆಯುವ ವಿಧಾನ: ಪಾತ್ರೆಗೆ ನೀರು ಸುರಿದು ಅದಕ್ಕೆ ಮಣ್ಣು ಬೆರೆಸಬೇಕು, ನಂತರ ಆ ಮಿಶ್ರಣದಿಂದ ಪಾತ್ರೆಯನ್ನು ಚೆನ್ನಾಗಿ ತೊಳೆಯಬೇಕು.
  5. ಹದೀಸಿನ ಬಾಹ್ಯಾರ್ಥ ಪ್ರಕಾರ ಈ ನಿಯಮವು ಎಲ್ಲಾ ನಾಯಿಗಳಿಗೂ ಅನ್ವಯವಾಗುತ್ತದೆ. ಬೇಟೆ ನಾಯಿ, ಕಾವಲು ನಾಯಿ ಮತ್ತು ಜಾನುವಾರುಗಳನ್ನು ಕಾಯುವ ನಾಯಿ ಮುಂತಾದ ಶಾಸನಕರ್ತನು (ಅಲ್ಲಾಹು) ಇಟ್ಟುಕೊಳ್ಳಬಹುದೆಂದು ಅನುಮತಿ ನೀಡಿದ ನಾಯಿಗಳಿಗೂ ಈ ನಿಯಮ ಅನ್ವಯವಾಗುತ್ತದೆ.
  6. ಸಾಬೂನು ಮತ್ತು ಪೊಟಾಸಿಯಂ ಮಣ್ಣಿಗೆ ಬದಲಿಯಾಗುವುದಿಲ್ಲ. ಏಕೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಣ್ಣು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅನುವಾದಗಳನ್ನು ತೋರಿಸಿ
ಭಾಷೆ: ಆಂಗ್ಲ ಉರ್ದು ಸ್ಪ್ಯಾನಿಷ್ ಇನ್ನಷ್ಟು (51)
ಇನ್ನಷ್ಟು