عَنْ ابْنِ عَبَّاسٍ رَضِيَ اللَّهُ عَنْهُمَا أَنَّ رَسُولَ اللَّهِ صَلَّى اللَّهُ عَلَيْهِ وَسَلَّمَ قَالَ:
«إنَّ اللَّهَ تَجَاوَزَ لِي عَنْ أُمَّتِي الخَطَأَ وَالنِّسْيَانَ وَمَا اسْتُكْرِهُوا عَلَيْهِ».
[قال النووي: حديث حسن] - [رواه ابن ماجه والبيهقي وغيرهما] - [الأربعون النووية: 39]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಅಲ್ಲಾಹು ನನಗಾಗಿ, ನನ್ನ ಸಮುದಾಯದ (ಜನರು ಮಾಡುವ) ಪ್ರಮಾದಗಳನ್ನು, ಮರೆವನ್ನು, ಮತ್ತು ಅವರು ಬಲವಂತದಿಂದ ಮಾಡಿರುವುದನ್ನು ಕ್ಷಮಿಸಿದ್ದಾನೆ."
[قال النووي: حديث حسن] - [رواه ابن ماجه والبيهقي وغيرهما] - [الأربعون النووية - 39]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅಲ್ಲಾಹು ಅವರ ಸಮುದಾಯವನ್ನು ಮೂರು ವಿಷಯಗಳಲ್ಲಿ ಕ್ಷಮಿಸಿದ್ದಾನೆ: ಮೊದಲನೆಯದು: ಪ್ರಮಾದಗಳು. ಅಂದರೆ, ಅವರಿಂದ ಉದ್ದೇಶಪೂರ್ವಕವಲ್ಲದೆ ಸಂಭವಿಸಿದ್ದು. ಅಂದರೆ, ಒಬ್ಬ ಮುಸ್ಲಿಮನಿಗೆ ತನ್ನ ಕ್ರಿಯೆಯಿಂದ ತಾನು ಉದ್ದೇಶಿಸಿದ್ದಲ್ಲದೆ ಬೇರೆಯೇ ಸಂಭವಿಸುವುದು. ಎರಡನೆಯದು: ಮರೆವು. ಅಂದರೆ, ಒಬ್ಬ ಮುಸ್ಲಿಂ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾನೆ. ಆದರೆ ಕಾರ್ಯೋನ್ಮುಖನಾಗುವಾಗ ಅದನ್ನು ಮರೆತುಬಿಡುತ್ತಾನೆ. ಇದರಲ್ಲೂ ಯಾವುದೇ ಪಾಪವಿಲ್ಲ. ಮೂರನೆಯದು: ಬಲವಂತ. ಒಬ್ಬ ಮನುಷ್ಯನಿಗೆ ಅವನು ಮಾಡಲು ಬಯಸದ ಒಂದು ಕಾರ್ಯವನ್ನು ಬಲವಂತದಿಂದ ಮಾಡಿಸುವುದು. ಆದರೆ, ಅವನಿಗೆ ಆ ಬಲವಂತವನ್ನು ತಡೆಯಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಬೇಕು. ಹಾಗಿದ್ದಲ್ಲಿ, ಅವನ ಮೇಲೆ ಯಾವುದೇ ಪಾಪ ಅಥವಾ ದೋಷವಿರುವುದಿಲ್ಲ. ಆದರೆ, ಗಮನಿಸಬೇಕಾದ ವಿಷಯವೇನೆಂದರೆ, ಈ ಹದೀಸ್ನಲ್ಲಿ ಹೇಳಿರುವ ವಿಷಯವು ನಿಷಿದ್ಧ ಕಾರ್ಯವನ್ನು ಮಾಡುವುದರಲ್ಲಿ ಮನುಷ್ಯ ಮತ್ತು ಅಲ್ಲಾಹನ ನಡುವೆ ಇರುವ ಪಾಪಕ್ಕೆ ಸಂಬಂಧಿಸಿದೆ. ಆದ್ದರಿಂದ, ಅವನು ಅಲ್ಲಾಹು ಆದೇಶಿಸಿದ ಕಾರ್ಯವನ್ನು ಮರೆವಿನಿಂದ ಬಿಟ್ಟು ಬಿಟ್ಟರೆ, ಅದು ರದ್ದಾಗುವುದಿಲ್ಲ (ಅದನ್ನು ನೆನಪಾದಾಗ ನಿರ್ವಹಿಸಬೇಕು). ಹಾಗೆಯೇ, ಅವನ ಆ ಕಾರ್ಯದಿಂದಾಗಿ (ಮರೆವಿನಿಂದ ಅಥವಾ ಪ್ರಮಾದದಿಂದ) ಒಂದು ಅಪರಾಧವು ಸಂಭವಿಸಿದರೆ, ಅದರಿಂದ ಇನ್ನೊಬ್ಬ ಮನುಷ್ಯನಿಗಿರುವ ಹಕ್ಕು ರದ್ದಾಗುವುದಿಲ್ಲ. ಉದಾಹರಣೆಗೆ, ಪ್ರಮಾದದಿಂದ ಕೊಲೆ ಮಾಡಿದರೆ, ರಕ್ತಪರಿಹಾರ ನೀಡುವುದು ಕಡ್ಡಾಯವಾಗುತ್ತದೆ. ಅಥವಾ ಪ್ರಮಾದದಿಂದ ಒಂದು ವಾಹನವನ್ನು ಹಾಳುಮಾಡಿದರೆ, ಅದಕ್ಕೆ ಪರಿಹಾರ ನೀಡುವುದು ಕಡ್ಡಾಯವಾಗುತ್ತದೆ.