عَنْ جَابِرٍ رَضيَ اللهُ عنهُ عَنِ النَّبِيِّ صَلَّى اللَّهُ عَلَيْهِ وَسَلَّمَ قَالَ:
«مَنْ قَالَ: سُبْحَانَ اللهِ العَظِيمِ وَبِحَمْدِهِ، غُرِسَتْ لَهُ نَخْلَةٌ فِي الجَنَّةِ».
[صحيح] - [رواه الترمذي] - [سنن الترمذي: 3464]
المزيــد ...
ಜಾಬಿರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾರು 'ಸುಬ್ಹಾನಲ್ಲಾಹಿಲ್ ಅಝೀಮ್ ವಬಿ ಹಮ್ದಿಹಿ' (ಮಹೋನ್ನತನಾದ ಅಲ್ಲಾಹು ಪರಿಶುದ್ಧನು ಮತ್ತು ಅವನಿಗೆ ಸರ್ವಸ್ತುತಿಗಳು) ಎಂದು ಹೇಳುತ್ತಾನೋ, ಅವನಿಗಾಗಿ ಸ್ವರ್ಗದಲ್ಲಿ ಒಂದು ಖರ್ಜೂರದ ಮರವನ್ನು ನೆಡಲಾಗುತ್ತದೆ".
[صحيح] - [رواه الترمذي] - [سنن الترمذي - 3464]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು '(ಸುಬ್ಹಾನಲ್ಲಾಹ್)' ಅಂದರೆ - ಅವನ ಅಸ್ತಿತ್ವದಲ್ಲಿ, ಗುಣಲಕ್ಷಣಗಳಲ್ಲಿ ಮತ್ತು ಕ್ರಿಯೆಗಳಲ್ಲಿ '(ಅಲ್-ಅಝೀಮ್)' ಮಹೋನ್ನತನಾದ ಅಲ್ಲಾಹುವನ್ನು ನಾನು ಪರಿಶುದ್ಧನೆಂದು ಸಾರುತ್ತೇನೆ, ಮತ್ತು '(ವಬಿ ಹಮ್ದಿಹಿ)' ಅವನ ಗುಣಗಳೆಲ್ಲವೂ ಪರಿಪೂರ್ಣವಾಗಿವೆಯೆಂದು ಹೇಳುವ ಮೂಲಕ ಅವನನ್ನು ಸ್ತುತಿಸುತ್ತೇನೆ ಎಂದು ಹೇಳುತ್ತಾನೋ; ಅವನು ಪ್ರತಿ ಬಾರಿ ಅದನ್ನು ಹೇಳುವಾಗ ಸ್ವರ್ಗದ ಭೂಮಿಯಲ್ಲಿ ಅವನಿಗಾಗಿ ಒಂದು ಖರ್ಜೂರದ ಮರವನ್ನು ಸ್ಥಾಪಿಸಲಾಗುತ್ತದೆ ಮತ್ತು ನೆಡಲಾಗುತ್ತದೆ.