ವರ್ಗ:

عَنْ أَبِي مُحَمَّدٍ عَبْدِ اللَّهِ بْنِ عَمْرِو بْنِ العَاصِ رَضِيَ اللَّهُ عَنْهُمَا، قَالَ: قَالَ رَسُولُ اللَّهِ صَلَّى اللهُ عَلَيْهِ وَسَلَّمَ:
«لَا يُؤْمِنُ أَحَدُكُمْ حَتَّى يَكُونَ هَوَاهُ تَبَعًا لِمَا جِئْتُ بِهِ».

[قال النووي: حديث صحيح] - [رويناه في كتاب الحجة بإسناد صحيح] - [الأربعون النووية: 41]
المزيــد ...

ಅಬೂ ಮುಹಮ್ಮದ್ ಅಬ್ದುಲ್ಲಾ ಇಬ್ನ್ ಅಮ್ರ್ ಇಬ್ನುಲ್-ಆಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನಿಮ್ಮಲ್ಲೊಬ್ಬನು, ಅವನ ಮನದ ಇಚ್ಛೆಯು ನಾನು ತಂದಿರುವುದನ್ನು (ಶರೀಅತ್‌) ಅನುಸರಿಸುವವರೆಗೆ (ಪೂರ್ಣ) ಸತ್ಯವಿಶ್ವಾಸಿಯಾಗುವುದಿಲ್ಲ".

[قال النووي: حديث صحيح] - [رويناه في كتاب الحجة بإسناد صحيح] - [الأربعون النووية - 41]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಂದಿರುವ ಆದೇಶಗಳು, ನಿಷೇಧಗಳು ಮತ್ತು ಇತರ ವಿಷಯಗಳನ್ನು ಪ್ರೀತಿಸಿ ಅವುಗಳನ್ನು ಅನುಸರಿಸುವವರೆಗೆ ಯಾರೂ ಕಡ್ಡಾಯವಾದ ಪರಿಪೂರ್ಣ ಈಮಾನ್ (ವಿಶ್ವಾಸ) ಅನ್ನು ಹೊಂದಿದ ಸತ್ಯವಿಶ್ವಾಸಿಯಾಗುವುದಿಲ್ಲ. ಆದ್ದರಿಂದ, ಅವರು (ಪ್ರವಾದಿ) ಆದೇಶಿಸಿದ್ದನ್ನು ಅವನು ಪ್ರೀತಿಸಬೇಕು, ಮತ್ತು ಅವರು ನಿಷೇಧಿಸಿದ್ದನ್ನು ಅವನು ದ್ವೇಷಿಸಬೇಕು.

ಹದೀಸಿನ ಪ್ರಯೋಜನಗಳು

  1. ಶರೀಅತ್‌ಗೆ ಶರಣಾಗುವುದು ಮತ್ತು ಅದಕ್ಕೆ ವಿಧೇಯರಾಗುವುದರಲ್ಲಿ ಈ ಹದೀಸ್ ಒಂದು ಮೂಲಭೂತ ನಿಯಮವಾಗಿದೆ.
  2. ಮನುಷ್ಯನು ಬುದ್ಧಿ ಅಥವಾ ಅಭ್ಯಾಸಗಳನ್ನು ತೀರ್ಪುಗಾರನನ್ನಾಗಿ ಮಾಡಿಕೊಳ್ಳುವುದರ ಬಗ್ಗೆ ಮತ್ತು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಂದಿರುವುದಕ್ಕಿಂತಲೂ ಅದಕ್ಕೆ ಆದ್ಯತೆ ನೀಡುವುದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಏಕೆಂದರೆ, ಹಾಗೆ ಮಾಡುವವನಿಗೆ ಸತ್ಯವಿಶ್ವಾಸವಿಲ್ಲವೆಂದು ತಿಳಿಸಲಾಗಿದೆ.
  3. ಪ್ರತಿಯೊಂದು ವಿಷಯದಲ್ಲೂ ಶರೀಅತ್ ಅನ್ನು ತೀರ್ಪುಗಾರನನ್ನಾಗಿ ಮಾಡುವುದು ಕಡ್ಡಾಯವಾಗಿದೆ. ಏಕೆಂದರೆ ಅವರು (ಪ್ರವಾದಿ) ಹೇಳುತ್ತಾರೆ: "ನಾನು ತಂದಿರುವುದನ್ನು."
  4. ಈಮಾನ್ (ವಿಶ್ವಾಸ) ವಿಧೇಯತೆಯಿಂದ ಹೆಚ್ಚಾಗುತ್ತದೆ ಮತ್ತು ಅವಿಧೇಯತೆಯಿಂದ ಕಡಿಮೆಯಾಗುತ್ತದೆ ಎಂದು ತಿಳಿಸಲಾಗಿದೆ.
ಅನುವಾದಗಳನ್ನು ತೋರಿಸಿ
ಭಾಷೆ: ಆಂಗ್ಲ ಉರ್ದು ಸ್ಪ್ಯಾನಿಷ್ ಇನ್ನಷ್ಟು (53)
ವರ್ಗಗಳು
ಇನ್ನಷ್ಟು