عَنْ عِمْرَانَ بْنِ حُصَيْنٍ رَضِيَ اللَّهُ عَنْهُمَا قَالَ: قَالَ النَّبِيُّ صَلَّى اللهُ عَلَيْهِ وَسَلَّمَ:
«خَيْرُكُمْ قَرْنِي، ثُمَّ الَّذِينَ يَلُونَهُمْ، ثُمَّ الَّذِينَ يَلُونَهُمْ» قَالَ عِمْرَانُ: لاَ أَدْرِي أَذَكَرَ النَّبِيُّ صَلَّى اللهُ عَلَيْهِ وَسَلَّمَ بَعْدُ قَرْنَيْنِ أَوْ ثَلاَثَةً، قَالَ النَّبِيُّ صَلَّى اللهُ عَلَيْهِ وَسَلَّمَ: «إِنَّ بَعْدَكُمْ قَوْمًا يَخُونُونَ وَلاَ يُؤْتَمَنُونَ، وَيَشْهَدُونَ وَلاَ يُسْتَشْهَدُونَ، وَيَنْذِرُونَ وَلاَ يَفُونَ، وَيَظْهَرُ فِيهِمُ السِّمَنُ».
[صحيح] - [متفق عليه] - [صحيح البخاري: 2651]
المزيــد ...
ಇಮ್ರಾನ್ ಬಿನ್ ಹುಸೈನ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅತ್ಯುತ್ತಮ ಪೀಳಿಗೆಯು ನನ್ನ ಪೀಳಿಗೆಯಾಗಿದೆ. ನಂತರ ಅವರನ್ನು ಅನುಸರಿಸುವವರು, ನಂತರ ಅವರನ್ನು ಅನುಸರಿಸುವವರು." ಇಮ್ರಾನ್ ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ನಂತರ ಎರಡು ಪೀಳಿಗೆಗಳನ್ನು ಉಲ್ಲೇಖಿಸಿದರೋ ಅಥವಾ ಮೂರನ್ನು ಉಲ್ಲೇಖಿಸಿದರೋ ಎಂದು ನನಗೆ ತಿಳಿದಿಲ್ಲ". ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) (ಮುಂದುವರಿಸಿ) ಹೇಳಿದರು: "ಖಂಡಿತವಾಗಿಯೂ ನಿಮ್ಮ ನಂತರ ಒಂದು ಜನಾಂಗ ಬರುತ್ತದೆ. ಅವರು ವಿಶ್ವಾಸದ್ರೋಹ ಮಾಡುತ್ತಾರೆ ಮತ್ತು ನಂಬಿಕೆಗೆ ಅರ್ಹರಾಗಿರುವುದಿಲ್ಲ. ಅವರು ಸಾಕ್ಷಿಗೆ ಕರೆಯದೆಯೇ ಸಾಕ್ಷ್ಯ ನುಡಿಯುತ್ತಾರೆ. ಅವರು ಹರಕೆ ಹೊರುತ್ತಾರೆ ಆದರೆ ಅದನ್ನು ನೆರವೇರಿಸುವುದಿಲ್ಲ. ಅವರಲ್ಲಿ (ಹೆಚ್ಚಾಗಿ) ಬೊಜ್ಜು ಕಾಣಿಸಿಕೊಳ್ಳುತ್ತದೆ."
[صحيح] - [متفق عليه] - [صحيح البخاري - 2651]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಂದು ಕಾಲಘಟ್ಟದಲ್ಲಿ ಒಟ್ಟುಗೂಡಿದ ಜನರ ಪೈಕಿ ಅತ್ಯುತ್ತಮ ಪೀಳಿಗೆ ಯಾರೆಂದರೆ, ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಸಹಾಬಿಗಳು ಇದ್ದ ಪೀಳಿಗೆ. ನಂತರ ಅವರನ್ನು ಅನುಸರಿಸುವ ಸತ್ಯವಿಶ್ವಾಸಿಗಳು - ಇವರು ಸಹಾಬಿಗಳನ್ನು ಕಂಡಿದ್ದಾರೆ ಆದರೆ ಸಂದೇಶವಾಹಕರನ್ನು ಕಂಡಿರುವುದಿಲ್ಲ. ನಂತರ ಅವರನ್ನು ಅನುಸರಿಸುವವರು. ಇವರು ತಾಬಿಈನ್ಗಳನ್ನು ಅನುಸರಿಸಿದವರು (ಅತ್ಬಾಉತ್ತಾಬಿಈನ್). ಇವರ ನಂತರದ ನಾಲ್ಕನೇ ಪೀಳಿಗೆಯನ್ನು ಉಲ್ಲೇಖಿಸುವ ವಿಚಾರದಲ್ಲಿ ಸಹಾಬಿ (ಇಮ್ರಾನ್) ಅನುಮಾನ ವ್ಯಕ್ತಪಡಿಸಿದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಖಂಡಿತವಾಗಿಯೂ ಅವರ ನಂತರ ಒಂದು ಜನಾಂಗ ಬರುತ್ತದೆ. ಅವರು ವಿಶ್ವಾಸದ್ರೋಹ ಮಾಡುತ್ತಾರೆ ಮತ್ತು ಜನರು ಅವರನ್ನು ನಂಬುವುದಿಲ್ಲ. ಅವರು ಸಾಕ್ಷ್ಯಕ್ಕಾಗಿ ಕರೆಯುವ ಮೊದಲೇ ಸಾಕ್ಷ್ಯ ನುಡಿಯುತ್ತಾರೆ. ಅವರು ಹರಕೆ ಹೊರುತ್ತಾರೆ ಆದರೆ ಅದನ್ನು ನೆರವೇರಿಸುವುದಿಲ್ಲ. ಅವರು ಆಹಾರ ಪಾನೀಯಗಳಲ್ಲಿ ಮಿತಿಮೀರುತ್ತಾರೆ, ಎಷ್ಟರವರೆಗೆಂದರೆ ಅವರಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತದೆ.