عَن أَبِي سَعِيدٍ الخُدْرِيَّ رَضِيَ اللَّهُ عَنْهُ أَنَّ رَسُولَ اللَّهِ صَلَّى اللهُ عَلَيْهِ وَسَلَّمَ قَالَ:
«إِذَا وُضِعَتِ الجِنَازَةُ وَاحْتَمَلَهَا الرِّجَالُ عَلَى أَعْنَاقِهِمْ فَإِنْ كَانَتْ صَالِحَةً قَالَتْ: قَدِّمُونِي، وَإِنْ كَانَتْ غَيْرَ صَالِحَةٍ قَالَتْ: يَا وَيْلَهَا أَيْنَ يَذْهَبُونَ بِهَا؟ يَسْمَعُ صَوْتَهَا كُلُّ شَيْءٍ إِلَّا الإِنْسَانَ، وَلَوْ سَمِعَهُ صَعِقَ».
[صحيح] - [رواه البخاري] - [صحيح البخاري: 1314]
المزيــد ...
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹುವಿನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವಾಗ ಮೃತದೇಹವನ್ನು (ಜನಾಝಾವನ್ನು) ಇರಿಸಲಾಗಿ, ಪುರುಷರು ಅದನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೋ, ಆಗ ಅದು ಸಜ್ಜನ ಆತ್ಮವಾಗಿದ್ದರೆ (ಪುಣ್ಯಾತ್ಮವಾಗಿದ್ದರೆ) ಅದು ಹೇಳುತ್ತದೆ: 'ನನ್ನನ್ನು ಬೇಗ ಮುಂದೆ ಕೊಂಡೊಯ್ಯಿರಿ'. ಒಂದು ವೇಳೆ ಅದು ಸಜ್ಜನ ಆತ್ಮವಾಗಿರದಿದ್ದರೆ (ಪಾಪಿ ಆತ್ಮವಾಗಿದ್ದರೆ) ಅದು ಹೇಳುತ್ತದೆ: 'ಅಯ್ಯೋ ನನ್ನ ದುರ್ಗತಿಯೇ! ಇವರು ಇದನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ?' ಅದರ ಧ್ವನಿಯನ್ನು ಮನುಷ್ಯನ ಹೊರತು ಪ್ರತಿಯೊಂದು ವಸ್ತುವೂ ಕೇಳುತ್ತದೆ. ಒಂದು ವೇಳೆ ಮನುಷ್ಯನು ಅದನ್ನು ಕೇಳಿದ್ದರೆ, ಅವನು ಮೂರ್ಛೆ ಹೋಗುತ್ತಿದ್ದನು."
[صحيح] - [رواه البخاري] - [صحيح البخاري - 1314]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾವಾಗ ಮೃತದೇಹವನ್ನು ಮಂಚದ ಮೇಲೆ ಇರಿಸಲಾಗಿ, ಪುರುಷರು ಅದನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೋ, ಆಗ ಅದು ಸಜ್ಜನ ಆತ್ಮವಾಗಿದ್ದರೆ, ತನ್ನ ಮುಂದೆ ಕಾಣುವ ಅನುಗ್ರಹಗಳ ಕಾರಣದಿಂದ ಅದು 'ನನ್ನನ್ನು ಬೇಗ ಮುಂದೆ ಕೊಂಡೊಯ್ಯಿರಿ' ಎಂದು ಹೇಳುತ್ತದೆ. ಒಂದು ವೇಳೆ ಅದು ಸಜ್ಜನ ಆತ್ಮವಾಗಿರದಿದ್ದರೆ, ಅದು ಭಯಾನಕ ಸ್ವರದಲ್ಲಿ ಕೂಗುತ್ತದೆ: 'ಅಯ್ಯೋ ನನ್ನ ವಿನಾಶವೇ! ಇವರು ಇದನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದಾರೆ?!' ಏಕೆಂದರೆ ಅದು ತನ್ನ ಮುಂದೆ ಶಿಕ್ಷೆಯನ್ನು ಕಾಣುತ್ತದೆ. ಅದರ ಧ್ವನಿಯನ್ನು ಮನುಷ್ಯನ ಹೊರತು ಪ್ರತಿಯೊಂದು ವಸ್ತುವೂ ಕೇಳುತ್ತದೆ. ಒಂದು ವೇಳೆ ಮನುಷ್ಯನು ಅದನ್ನು ಕೇಳಿದ್ದರೆ, ಅವನು ಕೇಳುವ ವಿಷಯದ ತೀವ್ರತೆಯಿಂದಾಗಿ ಮೂರ್ಛೆ ಹೋಗುತ್ತಿದ್ದನು.