+ -

عَنْ أَبِي هُرَيْرَةَ رضي الله عنه، عَنِ النَّبِيِّ صَلَّى اللَّهُ عَلَيْهِ وَسَلَّمَ قَالَ:
«مَا جَلَسَ قَوْمٌ مَجْلِسًا لَمْ يَذْكُرُوا اللَّهَ فِيهِ وَلَمْ يُصَلُّوا عَلَى نَبِيِّهِمْ إِلاَّ كَانَ عَلَيْهِمْ تِرَةً، فَإِنْ شَاءَ عَذَّبَهُمْ وَإِنْ شَاءَ غَفَرَ لَهُمْ».

[صحيح] - [رواه أبو داود والترمذي والنسائي في الكبرى] - [سنن الترمذي: 3380]
المزيــد ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವುದೇ ಜನರು ಒಂದು ಸಭೆಯಲ್ಲಿ ಕುಳಿತುಕೊಂಡಾಗ, ಅವರು ಅಲ್ಲಾಹನನ್ನು ಸ್ಮರಿಸದೆ ಮತ್ತು ತಮ್ಮ ಪ್ರವಾದಿಯ ಮೇಲೆ ದುರೂದ್ (ಸಲಾತ್) ಹೇಳದೆ ಇದ್ದರೆ, ಅದು ಅವರಿಗೆ ಕೊರತೆಯಾಗದೆ ಇರುವುದಿಲ್ಲ. ಅವನು ಬಯಸಿದರೆ ಅವರನ್ನು ಶಿಕ್ಷಿಸುವನು ಮತ್ತು ಅವನು ಬಯಸಿದರೆ ಅವರನ್ನು ಕ್ಷಮಿಸುವನು."

[صحيح] - - [سنن الترمذي - 3380]

ವಿವರಣೆ

ಅಲ್ಲಾಹನ ಸ್ಮರಣೆಯ ಬಗ್ಗೆ ನಿರ್ಲಕ್ಷ್ಯರಾಗುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎಚ್ಚರಿಸಿದ್ದಾರೆ. ಅದು ಹೇಗೆಂದರೆ, ಯಾವುದೇ ಜನರು ಒಂದು ಸಭೆಯಲ್ಲಿ ಕುಳಿತುಕೊಂಡಾಗ, ಅವರು ಅಲ್ಲಾಹನನ್ನು ಸ್ಮರಿಸದೆ ಮತ್ತು ಅವನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮೇಲೆ ದುರೂದ್ (ಸಲಾತ್) ಹೇಳದೆ ಇದ್ದರೆ, ಆ ಸಭೆಯು ಪುನರುತ್ಥಾನ ದಿನದಂದು ಅವರಿಗೆ ವಿಷಾದ, ಪಶ್ಚಾತ್ತಾಪ, ನಷ್ಟ ಮತ್ತು ಕೊರತೆಗೆ ಕಾರಣವಾಗುತ್ತದೆ. ಆಗ ಅಲ್ಲಾಹು ಬಯಸಿದರೆ ಅವರ ಹಿಂದಿನ ಪಾಪಗಳು ಮತ್ತು ಮುಂದಿನ ಲೋಪಗಳಿಗಾಗಿ ಅವರನ್ನು ಶಿಕ್ಷಿಸಬಹುದು. ಅವನು ಬಯಸಿದರೆ ತನ್ನ ಔದಾರ್ಯ ಮತ್ತು ಕರುಣೆಯಿಂದ ಅವರನ್ನು ಕ್ಷಮಿಸಲೂ ಬಹುದು.

ಹದೀಸಿನ ಪ್ರಯೋಜನಗಳು

  1. ಅಲ್ಲಾಹನನ್ನು ಸ್ಮರಿಸುವುದನ್ನು (ಧಿಕ್ರ್) ಪ್ರೋತ್ಸಾಹಿಸಲಾಗಿದೆ ಮತ್ತು ಅದರ ಮಹತ್ವವನ್ನು ತಿಳಿಸಲಾಗಿದೆ.
  2. ಅಲ್ಲಾಹನನ್ನು ಸ್ಮರಿಸುವ ಮತ್ತು ಅವನ ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ಮರಿಸುವ ಸಭೆಗಳ ಮಹತ್ವವನ್ನು ತಿಳಿಸಲಾಗಿದೆ. ಹಾಗೆಯೇ, ಅದಿಲ್ಲದ ಸಭೆಗಳು ಪುನರುತ್ಥಾನ ದಿನದಂದು ಅದರಲ್ಲಿ ಪಾಲ್ಗೊಂಡವರಿಗೆ ದುರಾದೃಷ್ಟದ ಸಭೆಗಳಾಗಿವೆಯೆಂದು ತಿಳಿಸಲಾಗಿದೆ.
  3. ಅಲ್ಲಾಹನ ಸ್ಮರಣೆಯನ್ನು (ಧಿಕ್ರ್) ನಿರ್ಲಕ್ಷಿಸುವುದರ ಬಗ್ಗೆ ನೀಡಲಾದ ಎಚ್ಚರಿಕೆಯು ಕೇವಲ ಸಭೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಅದು ಇತರ ವಿಷಯಗಳಿಗೂ ಅನ್ವಯಿಸುತ್ತದೆ. ಇಮಾಮ್ ನವವಿ ಹೇಳುತ್ತಾರೆ: "ಒಬ್ಬ ವ್ಯಕ್ತಿಯು ಒಂದು ಸ್ಥಳದಲ್ಲಿ ಕುಳಿತಿದ್ದರೆ, ಅಲ್ಲಾಹನನ್ನು ಸ್ಮರಿಸದೆ ಅವನು ಅಲ್ಲಿಂದ ಎದ್ದು ಹೋಗುವುದು ಅಸಹ್ಯಕರ (ಕರಾಹತ್) ವಾಗಿದೆ."
  4. ಪುನರುತ್ಥಾನ ದಿನದಂದು ಅವರಿಗೆ ಉಂಟಾಗುವ ವಿಷಾದವೇನೆಂದರೆ: ಒಂದೋ ಆ ಸಮಯವನ್ನು ಅಲ್ಲಾಹನಿಗೆ ವಿಧೇಯತೆ ತೋರಲು ಬಳಸಿಕೊಳ್ಳದ ಕಾರಣದಿಂದ ಪ್ರತಿಫಲ ಮತ್ತು ಪುಣ್ಯವು ನಷ್ಟವಾಗುವುದು, ಅಥವಾ ಆ ಸಮಯವನ್ನು ಅಲ್ಲಾಹನಿಗೆ ಅವಿಧೇಯತೆ ತೋರಲು ಬಳಸಿರುವುದರಿಂದ ಪಾಪ ಮತ್ತು ಶಿಕ್ಷೆಯು ದೊರೆಯುವುದು ಆಗಿರಬಹುದು.
  5. ಈ ಎಚ್ಚರಿಕೆಯು ಅನುಮತಿಸಲಾದ ವಿಷಯಗಳಲ್ಲಿ ನಿರ್ಲಕ್ಷ್ಯ ತಾಳಿದ್ದಕ್ಕೆ ಆಗಿರಬೇಕಾದರೆ, ಗೀಬತ್ (ಪರನಿಂದೆ), ನಮೀಮತ್ (ಚಾಡಿ) ಮತ್ತು ಇತರ ನಿಷಿದ್ಧ ಕಾರ್ಯಗಳಿಂದ ತುಂಬಿರುವ ನಿಷಿದ್ಧ ಸಭೆಗಳ ಸ್ಥಿತಿಯೇನಾಗಿರಬಹುದು?!
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ತಮಿಳು ಥಾಯ್ الأسامية الأمهرية الهولندية الغوجاراتية الدرية الرومانية المجرية الموري المالاجاشية الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು