+ -

عَنْ عَائِشَةَ أُمِّ المُؤْمِنينَ رَضِيَ اللَّهُ عَنْهَا أَنَّهَا قَالَتْ:
مَا خُيِّرَ رَسُولُ اللَّهِ صَلَّى اللهُ عَلَيْهِ وَسَلَّمَ بَيْنَ أَمْرَيْنِ إِلَّا أَخَذَ أَيْسَرَهُمَا، مَا لَمْ يَكُنْ إِثْمًا، فَإِنْ كَانَ إِثْمًا كَانَ أَبْعَدَ النَّاسِ مِنْهُ، وَمَا انْتَقَمَ رَسُولُ اللَّهِ صَلَّى اللهُ عَلَيْهِ وَسَلَّمَ لِنَفْسِهِ إِلَّا أَنْ تُنْتَهَكَ حُرْمَةُ اللَّهِ، فَيَنْتَقِمَ لِلَّهِ بِهَا.

[صحيح] - [متفق عليه] - [صحيح البخاري: 3560]
المزيــد ...

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು:
"ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ವಿಷಯಗಳ ನಡುವೆ ಆಯ್ಕೆ ನೀಡಲಾದಾಗ, ಅವರು ಯಾವಾಗಲೂ ಸುಲಭವಾದದ್ದನ್ನು ಆರಿಸಿಕೊಳ್ಳುತ್ತಿದ್ದರು, ಅದು ಪಾಪವಲ್ಲದಿದ್ದರೆ ಮಾತ್ರ. ಒಂದು ವೇಳೆ ಅದು ಪಾಪವಾಗಿದ್ದರೆ, ಅವರು ಎಲ್ಲರಿಗಿಂತ ಮೊದಲು ಅದರಿಂದ ದೂರವಾಗಿರುತ್ತಿದ್ದರು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸ್ವಂತಕ್ಕಾಗಿ ಎಂದಿಗೂ ಪ್ರತೀಕಾರ ತೀರಿಸಿಕೊಂಡಿರಲಿಲ್ಲ, ಆದರೆ ಅಲ್ಲಾಹನ ಪವಿತ್ರತೆಯನ್ನು ಉಲ್ಲಂಘಿಸಿದಾಗ ಹೊರತು. ಆಗ ಅವರು ಅಲ್ಲಾಹನಿಗಾಗಿ ಪ್ರತೀಕಾರ ತೀರಿಸುತ್ತಿದ್ದರು."

[صحيح] - [متفق عليه] - [صحيح البخاري - 3560]

ವಿವರಣೆ

ಉಮ್ಮುಲ್ ಮುಅಮಿನೀನ್ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಗುಣಗಳನ್ನು ತಿಳಿಸಿದ್ದಾರೆ. ಅವು ಯಾವುದೆಂದರೆ: ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎರಡು ವಿಷಯಗಳ ನಡುವೆ ಆಯ್ಕೆ ನೀಡಿದಾಗ, ಅವರು ಸುಲಭವಾದದ್ದನ್ನೇ ಆರಿಸಿಕೊಳ್ಳುತ್ತಿದ್ದರು. ಆದರೆ ಅದು ಪಾಪಕ್ಕೆ ಕಾರಣವಾಗದಿದ್ದರೆ ಮಾತ್ರ. ಒಂದು ವೇಳೆ ಸುಲಭವಾದದ್ದು ಪಾಪಕ್ಕೆ ಕಾರಣವಾದರೆ, ಅವರು ಎಲ್ಲರಿಗಿಂತ ಮೊದಲು ಅದರಿಂದ ದೂರವಾಗಿರುತ್ತಿದ್ದರು ಮತ್ತು ಕಠಿಣವಾದದ್ದನ್ನು ಆಯ್ಕೆ ಮಾಡುತ್ತಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸ್ವಂತಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳುತ್ತಿರಲಿಲ್ಲ. ಬದಲಿಗೆ ತಮ್ಮ ವಿಷಯದಲ್ಲಿ ಜನರನ್ನು ಕ್ಷಮಿಸುತ್ತಿದ್ದರು ಮತ್ತು ಮನ್ನಿಸುತ್ತಿದ್ದರು. ಆದರೆ ಅಲ್ಲಾಹನ ಪವಿತ್ರತೆಯನ್ನು ಉಲ್ಲಂಘಿಸಲಾದಾಗ, ಅವರು ಅಲ್ಲಾಹನಿಗಾಗಿ ಪ್ರತೀಕಾರ ತೀರಿಸುತ್ತಿದ್ದರು. ಅವರು ಅಲ್ಲಾಹನಿಗಾಗಿ ಅತಿಯಾಗಿ ಕೋಪಗೊಳ್ಳುತ್ತಿದ್ದರು.

ಹದೀಸಿನ ಪ್ರಯೋಜನಗಳು

  1. ಪಾಪವಲ್ಲದ ವಿಷಯಗಳಲ್ಲಿ ಸುಲಭವಾದದ್ದನ್ನು ಆರಿಸಿಕೊಳ್ಳುವುದು ಅಪೇಕ್ಷಣೀಯವಾಗಿದೆ.
  2. ಇಸ್ಲಾಮ್ ಸರಳತೆಯ ಧರ್ಮವಾಗಿದೆ.
  3. ಅಲ್ಲಾಹನಿಗಾಗಿ ಕೋಪಗೊಳ್ಳುವುದು ಧಾರ್ಮಿಕ ನಿಯಮವಾಗಿದೆ.
  4. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾಳ್ಮೆ, ಸಹನೆ ಮತ್ತು ಅಲ್ಲಾಹನ ಮಿತಿಗಳನ್ನು (ನಿಯಮಗಳನ್ನು) ಸ್ಥಾಪಿಸುವ ವಿಷಯದಲ್ಲಿ ಸತ್ಯಕ್ಕಾಗಿ ನಿಲ್ಲುವ ಗುಣಗಳನ್ನು ಹೊಂದಿದ್ದರು.
  5. ಇಬ್ನ್ ಹಜರ್‌ ಹೇಳುತ್ತಾರೆ: "ಇದರಲ್ಲಿ ಕಠಿಣವಾದದ್ದನ್ನು ತೆಗೆದುಕೊಳ್ಳದೆ, ಸುಲಭವಾಗಿರುವುದರಲ್ಲಿ ತೃಪ್ತಿಪಡಬೇಕೆಂದು ಹೇಳಲಾಗಿದೆ ಮತ್ತು ಅತ್ಯವಶ್ಯಕವಲ್ಲದ ವಿಷಯಗಳಲ್ಲಿ ಪಟ್ಟು ಹಿಡಿಯುವುದನ್ನು ಬಿಟ್ಟುಬಿಡಬೇಕೆಂದು ಹೇಳಲಾಗಿದೆ."
  6. ಅಲ್ಲಾಹನ ಹಕ್ಕುಗಳಿಗೆ ಹೊರತುಪಡಿಸಿ ಇತರ ವಿಷಯಗಳಲ್ಲಿ ಕ್ಷಮಿಸುವುದನ್ನು ಪ್ರೇರೇಪಿಸಲಾಗಿದೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಬಂಗಾಳಿ ಫ್ರೆಂಚ್ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الموري المالاجاشية الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು