عَنْ أَنَسِ بْنِ مَالِكٍ رَضِيَ اللَّهُ عَنْهُ قَالَ: مَا خَطَبَنَا نَبِيُّ اللهِ صَلَّى اللهُ عَلَيْهِ وَسَلَّمَ إِلَّا قَالَ:
«لَا إِيمَانَ لِمَنْ لَا أَمَانَةَ لَهُ، وَلَا دِينَ لِمَنْ لَا عَهْدَ لَهُ».

[حسن لغيره] - [رواه أحمد] - [مسند أحمد: 12383]
المزيــد ...

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ಪ್ರವಚನ ನೀಡಿದಾಗಲೆಲ್ಲಾ ಹೀಗೆ ಹೇಳದೇ ಇರುತ್ತಿರಲಿಲ್ಲ:
"ಯಾರಲ್ಲಿ ಅಮಾನತ್ (ನಂಬಿಕಸ್ತಿಕೆ/ಪ್ರಾಮಾಣಿಕತೆ) ಇಲ್ಲವೋ ಅವನಲ್ಲಿ ಈಮಾನ್ (ವಿಶ್ವಾಸ) ಇಲ್ಲ. ಮತ್ತು ಯಾರಲ್ಲಿ ಕರಾರು ಪಾಲನೆ ಇಲ್ಲವೋ ಅವನಲ್ಲಿ ಧರ್ಮವಿಲ್ಲ".

[حسن لغيره] - [رواه أحمد] - [مسند أحمد - 12383]

ವಿವರಣೆ

ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರು ತಿಳಿಸುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಚನ ನೀಡಿದಾಗ ಅಥವಾ ಉಪದೇಶಿಸಿದಾಗ, ಈ ಎರಡು ವಿಷಯಗಳನ್ನು ಉಲ್ಲೇಖಿಸದೇ ಇರುವುದು ತೀರಾ ಅಪರೂಪವಾಗಿತ್ತು: ಮೊದಲನೆಯದು: ಯಾರ ಮನಸ್ಸಿನಲ್ಲಿ ಸಂಪತ್ತು, ಆತ್ಮ ಅಥವಾ ಕುಟುಂಬದ ವಿಷಯದಲ್ಲಿ ಯಾರಿಗಾದರೂ ದ್ರೋಹ ಬಗೆಯುವ ಆಲೋಚನೆ ಇದೆಯೋ (ಅಥವಾ ದ್ರೋಹ ಬಗೆಯುತ್ತಾನೋ), ಅವನಲ್ಲಿ ಪರಿಪೂರ್ಣ ಈಮಾನ್ ಇರುವುದಿಲ್ಲ. ಎರಡನೆಯದು: ಯಾರು ಒಪ್ಪಂದಗಳು ಮತ್ತು ಕರಾರುಗಳಿಗೆ ದ್ರೋಹ ಬಗೆಯುತ್ತಾರೋ ಮತ್ತು ಅವುಗಳನ್ನು ಮುರಿಯುತ್ತಾರೋ, ಅವರಲ್ಲಿ ಪರಿಪೂರ್ಣ ಧರ್ಮವಿರುವುದಿಲ್ಲ.

ಹದೀಸಿನ ಪ್ರಯೋಜನಗಳು

  1. ಅಮಾನತ್ (ನಂಬಿಕಸ್ತಿಕೆ) ಅನ್ನು ಪೂರೈಸಲು ಮತ್ತು ಕರಾರುಗಳನ್ನು ಉಳಿಸಿಕೊಳ್ಳಲು ಪ್ರೋತ್ಸಾಹಿಸಲಾಗಿದೆ. ಏಕೆಂದರೆ ಅವುಗಳನ್ನು ಮುರಿಯುವುದು ಈಮಾನ್ ಅನ್ನು ಕಡಿಮೆ ಮಾಡುತ್ತದೆ.
  2. ಅಮಾನತ್‌ಗೆ ದ್ರೋಹ ಬಗೆಯುವುದು ಮತ್ತು ಕರಾರು ಮುರಿಯುವುದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ, ಮತ್ತು ಅದು ಮಹಾಪಾಪಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.
  3. ಈ ಹದೀಸ್, ಅಲ್ಲಾಹು ಮತ್ತು ಅವನ ದಾಸನ ನಡುವಿನ ಅಮಾನತ್ ಹಾಗೂ ಕರಾರನ್ನು, ಮತ್ತು ಸೃಷ್ಟಿಗಳ (ಮನುಷ್ಯರ) ಪರಸ್ಪರರ ನಡುವಿನ ಅಮಾನತ್ ಹಾಗೂ ಕರಾರನ್ನು ಕಾಪಾಡಿಕೊಳ್ಳುವುದನ್ನು ಒಳಗೊಂಡಿದೆ.
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ಸಿಂಹಳೀಯ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು