+ -

عَنْ أَبِي هُرَيْرَةَ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«إِنَّ اللهَ يَرْضَى لَكُمْ ثَلَاثًا، وَيَكْرَهُ لَكُمْ ثَلَاثًا، فَيَرْضَى لَكُمْ: أَنْ تَعْبُدُوهُ، وَلَا تُشْرِكُوا بِهِ شَيْئًا، وَأَنْ تَعْتَصِمُوا بِحَبْلِ اللهِ جَمِيعًا وَلَا تَفَرَّقُوا، وَيَكْرَهُ لَكُمْ: قِيلَ وَقَالَ، وَكَثْرَةَ السُّؤَالِ، وَإِضَاعَةِ الْمَالِ».

[صحيح] - [رواه مسلم] - [صحيح مسلم: 1715]
المزيــد ...

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಖಂಡಿತವಾಗಿಯೂ ಅಲ್ಲಾಹು ನಿಮಗೆ ಮೂರು ವಿಷಯಗಳನ್ನು ಇಷ್ಟಪಡುತ್ತಾನೆ ಮತ್ತು ನಿಮಗೆ ಮೂರು ವಿಷಯಗಳನ್ನು ದ್ವೇಷಿಸುತ್ತಾನೆ. ಅವನು ನಿಮಗೆ ಇಷ್ಟಪಡುವ ವಿಷಯಗಳೆಂದರೆ: ನೀವು ಅವನನ್ನು (ಮಾತ್ರ) ಆರಾಧಿಸುವುದು ಹಾಗೂ ಅವನೊಂದಿಗೆ ಯಾವುದನ್ನೂ ಸಹಭಾಗಿಯಾಗಿ ಮಾಡದಿರುವುದು, ನೀವೆಲ್ಲರೂ ಒಗ್ಗೂಡಿ ಅಲ್ಲಾಹನ ಹಗ್ಗವನ್ನು (ಧರ್ಮವನ್ನು) ಗಟ್ಟಿಯಾಗಿ ಹಿಡಿದುಕೊಳ್ಳುವುದು ಮತ್ತು ನೀವು ಭಿನ್ನರಾಗದಿರುವುದು. ಅವನು ನಿಮಗೆ ದ್ವೇಷಿಸುವ ವಿಷಯಗಳೆಂದರೆ: 'ಹೀಗೆ ಹೇಳಲಾಯಿತು ಹಾಗೆ ಹೇಳಲಾಯಿತು' ಎಂಬ ಅನಗತ್ಯ ಮಾತುಗಳನ್ನು ಹೇಳುವುದು, ಅತಿಯಾದ ಪ್ರಶ್ನೆಗಳನ್ನು ಕೇಳುವುದು, ಮತ್ತು ಸಂಪತ್ತನ್ನು ವ್ಯರ್ಥ ಮಾಡುವುದು".

[صحيح] - [رواه مسلم] - [صحيح مسلم - 1715]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅಲ್ಲಾಹು ತನ್ನ ದಾಸರಲ್ಲಿ ಮೂರು ಗುಣಗಳನ್ನು ಪ್ರೀತಿಸುತ್ತಾನೆ ಮತ್ತು ಮೂರು ಗುಣಗಳನ್ನು ದ್ವೇಷಿಸುತ್ತಾನೆ. ಅವನು ಅವರಲ್ಲಿ ಪ್ರೀತಿಸುವುದೇನೆಂದರೆ: ಅವರು ಅವನ ಏಕತ್ವವನ್ನು (ತೌಹೀದ್) ಪಾಲಿಸುವುದು ಮತ್ತು ಅವನೊಂದಿಗೆ ಯಾವುದನ್ನೂ ಸಹಭಾಗಿಯಾಗಿ ಮಾಡದಿರುವುದು, ಅಲ್ಲಾಹನ ಕರಾರು, ಕುರ್‌ಆನ್ ಮತ್ತು ಅವನ ಪ್ರವಾದಿಯ ಸುನ್ನತ್‌ಗೆ ಎಲ್ಲರೂ ಒಗ್ಗೂಡಿ ಬದ್ಧರಾಗಿರುವುದು, ಮತ್ತು ಮುಸ್ಲಿಂ ಸಮುದಾಯದಿಂದ (ಜಮಾಅತ್ ನಿಂದ) ಬೇರ್ಪಡದಿರುವುದು. ಅವನು ಅವರಿಗೆ ದ್ವೇಷಿಸುವುದೇನೆಂದರೆ: ವ್ಯರ್ಥ ಮಾತುಗಳನ್ನು ಹೇಳುವುದು ಮತ್ತು ತಮಗೆ ಸಂಬಂಧಿಸದ ವಿಷಯಗಳಲ್ಲಿ ಅನಗತ್ಯವಾಗಿ ಮಾತನಾಡುವುದು, ಸಂಭವಿಸದ ವಿಷಯಗಳ ಬಗ್ಗೆ (ಊಹಾತ್ಮಕ) ಪ್ರಶ್ನೆಗಳನ್ನು ಕೇಳುವುದು, ಅಥವಾ ಜನರಲ್ಲಿ ಅವರ ಸಂಪತ್ತನ್ನು ಮತ್ತು ಅವರ ಕೈಯಲ್ಲಿರುವುದನ್ನು ಕೇಳುವುದು (ಯಾಚಿಸುವುದು) ಮತ್ತು ಅಗತ್ಯವಿಲ್ಲದಿದ್ದರೂ ಪ್ರಶ್ನೆಗಳನ್ನು ಕೇಳುವುದು, ಹಾಗೂ ಸಂಪತ್ತನ್ನು ವ್ಯರ್ಥ ಮಾಡುವುದು, ಅದನ್ನು ಧರ್ಮವು ಅನುಮೋದಿಸದ ಮಾರ್ಗಗಳಲ್ಲಿ ಖರ್ಚು ಮಾಡುವುದು ಮತ್ತು ಅದನ್ನು ನಾಶಕ್ಕೆ ಒಡ್ಡುವುದು.

ಹದೀಸಿನ ಪ್ರಯೋಜನಗಳು

  1. ಸರ್ವಶಕ್ತನಾದ ಅಲ್ಲಾಹು ತನ್ನ ದಾಸರಿಂದ ತನ್ನ ಆರಾಧನೆಯಲ್ಲಿ 'ಇಖ್ಲಾಸ್' (ನಿಷ್ಕಳಂಕತೆ) ಇರುವುದನ್ನು ಪ್ರೀತಿಸುತ್ತಾನೆ, ಮತ್ತು ಅವರು ಸತ್ಯನಿಷೇಧ ಮಾಡುವುದನ್ನು ದ್ವೇಷಿಸುತ್ತಾನೆ.
  2. ಅಲ್ಲಾಹನ ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಪ್ರೋತ್ಸಾಹಿಸಲಾಗಿದೆ; ಏಕೆಂದರೆ ಅದರಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯವಿದೆ.
  3. ಜಮಾಅತ್ (ಸಂಘಟಿತ) ಅನ್ನು ಪ್ರೋತ್ಸಾಹಿಸಲಾಗಿದೆ. ಅದಕ್ಕೆ ಅಂಟಿಕೊಂಡಿರಲು ಹಾಗೂ ಒಗ್ಗಟ್ಟಾಗಿರಲು ಆದೇಶಿಸಲಾಗಿದೆ. ಅದರ ವಿರುದ್ಧವಾದ ಭಿನ್ನಾಭಿಪ್ರಾಯ ಮತ್ತು ಒಳಜಗಳಗಳನ್ನು ನಿಷೇಧಿಸಲಾಗಿದೆ.
  4. ಸಂಬಂಧಿಸದ ವಿಷಯಗಳಲ್ಲಿ ಅತಿಯಾಗಿ ಮಾತನಾಡುವುದನ್ನು ನಿಷೇಧಿಸಲಾಗಿದೆ; ಏಕೆಂದರೆ ಅದು ಅನುಮತಿಯಿರುವ ವಿಷಯದಲ್ಲಾಗಿದ್ದರೆ ಅದರಿಂದ ಸಮಯವು ವ್ಯರ್ಥವಾಗುತ್ತದೆ, ಮತ್ತು ಅದು ನಿಷಿದ್ಧವಾದ ವಿಷಯದಲ್ಲಾಗಿದ್ದರೆ ಅದರಲ್ಲಿ ಅನೇಕ ಪಾಪಗಳಿರುತ್ತವೆ.
  5. ಜನರ (ಖಾಸಗಿ) ವಿಷಯಗಳ ಬಗ್ಗೆ ಚರ್ಚಿಸುವುದು, ಅವರ ಪರಿಸ್ಥಿತಿಗಳನ್ನು ತನಿಖೆ ಮಾಡುವುದು ಮತ್ತು ಅವರ ಮಾತು ಹಾಗೂ ಕೃತ್ಯಗಳನ್ನು ಇತರರಿಗೆ ವರದಿ ಮಾಡುವುದನ್ನು ತ್ಯಜಿಸಬೇಕೆಂದು ತಿಳಿಸಲಾಗಿದೆ.
  6. ಜನರ ಮುಂದೆ ಅತಿಯಾಗಿ ಕೈಯೊಡ್ಡುವುದನ್ನು ನಿಷೇಧಿಸಲಾಗಿದೆ.
  7. ಸಂಪತ್ತನ್ನು ವ್ಯರ್ಥ ಮಾಡುವುದನ್ನು ನಿಷೇಧಿಸಲಾಗಿದೆ. ಸಂಪತ್ತನ್ನು ಸಂರಕ್ಷಿಸಲು ಮತ್ತು ಪ್ರಯೋಜನಕಾರಿ ವಿಷಯಗಳಲ್ಲಿ ತೊಡಗಿಸಲು ಪ್ರೋತ್ಸಾಹಿಸಲಾಗಿದೆ.
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ಸಿಂಹಳೀಯ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು