عَنِ المُغِيرَةِ بْنِ شُعْبَةَ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«لاَ يَزَالُ طَائِفَةٌ مِنْ أُمَّتِي ظَاهِرِينَ، حَتَّى يَأْتِيَهُمْ أَمْرُ اللَّهِ وَهُمْ ظَاهِرُونَ».
[صحيح] - [متفق عليه] - [صحيح البخاري: 7311]
المزيــد ...
ಮುಗೀರ ಬಿನ್ ಶುಅಬ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ನನ್ನ ಸಮುದಾಯದ ಒಂದು ಗುಂಪು ಸದಾ (ಸತ್ಯದ ಮೇಲೆ) ವಿಜಯಿಗಳಾಗಿರುವರು. ಅಲ್ಲಾಹುವಿನ ಆದೇಶವು ಅವರ ಬಳಿ ಬರುವವರೆಗೆ. ಅವರು (ಆಗಲೂ) ವಿಜಯಿಗಳಾಗಿಯೇ ಇರುವರು".
[صحيح] - [متفق عليه] - [صحيح البخاري - 7311]
ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ನನ್ನ ಸಮುದಾಯದ ಒಂದು ಗುಂಪು ಸದಾ ಜನರ ಮೇಲೆ ಪ್ರಕಟವಾಗಿರುವರು, ತಮ್ಮ ವಿರೋಧಿಗಳ ಮೇಲೆ ವಿಜಯಶಾಲಿಗಳಾಗಿರುವರು. ಇದು ಅಂತ್ಯ ಸಮಯದಲ್ಲಿ ಪುನರುತ್ಥಾನವು ಸಂಭವಿಸುವುದಕ್ಕೆ ಮೊದಲು ಅಲ್ಲಾಹುವಿನ ಆದೇಶವು ಬಂದು ಅವರ ಆತ್ಮಗಳನ್ನು ವಶಪಡಿಸಿಕೊಳ್ಳುವವರೆಗೆ ಮುಂದುವರಿಯುತ್ತದೆ.