عَنْ عِكْرِمَةَ:
أَنَّ عَلِيًّا رَضِيَ اللَّهُ عَنْهُ حَرَّقَ قَوْمًا، فَبَلَغَ ابْنَ عَبَّاسٍ فَقَالَ: لَوْ كُنْتُ أَنَا لَمْ أُحَرِّقْهُمْ لِأَنَّ النَّبِيَّ صَلَّى اللهُ عَلَيْهِ وَسَلَّمَ قَالَ: «لاَ تُعَذِّبُوا بِعَذَابِ اللَّهِ»، وَلَقَتَلْتُهُمْ كَمَا قَالَ النَّبِيُّ صَلَّى اللهُ عَلَيْهِ وَسَلَّمَ: «مَنْ بَدَّلَ دِينَهُ فَاقْتُلُوهُ».

[صحيح] - [رواه البخاري] - [صحيح البخاري: 3017]
المزيــد ...

ಇಕ್ರಿಮಾ ರಿಂದ ವರದಿ:
ಅಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಒಂದು ಸಮುದಾಯವನ್ನು (ಜನರ ಗುಂಪನ್ನು) ಸುಟ್ಟುಹಾಕಿದರು. ಈ ವಿಷಯ ಇಬ್ನ್ ಅಬ್ಬಾಸ್ ರಿಗೆ ತಲುಪಿದಾಗ ಅವರು ಹೇಳಿದರು: "ನಾನಾಗಿದ್ದರೆ ಅವರನ್ನು ಸುಡುತ್ತಿರಲಿಲ್ಲ. ಏಕೆಂದರೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳಿದ್ದಾರೆ: 'ಅಲ್ಲಾಹನ ಶಿಕ್ಷೆಯಿಂದ (ಬೆಂಕಿಯಿಂದ) ನೀವು ಶಿಕ್ಷಿಸಬೇಡಿ'. 'ಯಾರು ತನ್ನ ಧರ್ಮವನ್ನು ಬದಲಿಸುತ್ತಾನೋ, ಅವನನ್ನು ಕೊಲ್ಲಿರಿ' ಎಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದಂತೆ ನಾನು ಅವರನ್ನು ಖಂಡಿತವಾಗಿಯೂ ಕೊಲ್ಲುತ್ತಿದ್ದೆನು".

[صحيح] - [رواه البخاري] - [صحيح البخاري - 3017]

ವಿವರಣೆ

ಅಲೀ ಇಬ್ನ್ ಅಬೀ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ತಮ್ಮ ಇಜ್ತಿಹಾದ್ (ಧಾರ್ಮಿಕ ನಿಯಮವನ್ನು ಸಂಶೋಧಿಸುವುದು) ನಿಂದ, ಇಸ್ಲಾಂನಿಂದ ಧರ್ಮಭ್ರಷ್ಟರಾದ ನಾಸ್ತಿಕರ ಒಂದು ಗುಂಪನ್ನು ಬೆಂಕಿಯಿಂದ ಸುಟ್ಟುಹಾಕಿದರು. ಅಬ್ದುಲ್ಲಾ ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಗೆ ಈ ಸುದ್ದಿ ತಲುಪಿದಾಗ, ಅವರು ಅವರನ್ನು ಕೊಲ್ಲುವುದನ್ನು ಬೆಂಬಲಿಸಿದರು; ಆದರೆ ಬೆಂಕಿಯಿಂದ ಸುಡುವುದನ್ನು ಖಂಡಿಸಿದರು. ಅವರು ಹೇಳಿದರು: ನಾನು ಅವರ ಸ್ಥಾನದಲ್ಲಿದ್ದರೆ ಅವರನ್ನು ಬೆಂಕಿಯಿಂದ ಸುಡುತ್ತಿರಲಿಲ್ಲ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೆಂಕಿಯ ಒಡೆಯನಾದ ಅಲ್ಲಾಹನ ಹೊರತು ಬೇರೆ ಯಾರೂ ಬೆಂಕಿಯಿಂದ ಶಿಕ್ಷಿಸಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಅವರನ್ನು ಕೊಲ್ಲುವುದು ಸಾಕಾಗುತ್ತಿತ್ತು (ಬೆಂಕಿಯಿಲ್ಲದೆ). ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದ್ದಾರೆ: ಯಾರು ಇಸ್ಲಾಂನಿಂದ ಧರ್ಮಭ್ರಷ್ಟನಾಗಿ ತನ್ನ ಧರ್ಮವನ್ನು ಬೇರೆ ಧರ್ಮಕ್ಕೆ ಬದಲಾಯಿಸುತ್ತಾನೋ, ಅವನನ್ನು ಕೊಲ್ಲಿರಿ.

ಹದೀಸಿನ ಪ್ರಯೋಜನಗಳು

  1. ಇಸ್ಲಾಂ ಧರ್ಮದಿಂದ ಧರ್ಮಭ್ರಷ್ಟನಾದವನನ್ನು (ಮುರ್ತದ್ದ್) ಕೊಲ್ಲುವುದು ಕಡ್ಡಾಯವಾಗಿದೆ ಎಂಬ ಬಗ್ಗೆ ವಿದ್ವಾಂಸರ ಸರ್ವಾನುಮತವಿದೆ (ಇಜ್ಮಾ). ಆದರೆ ಇದಕ್ಕೆ ಷರತ್ತುಗಳು ಅನ್ವಯವಾಗುತ್ತವೆ ಮತ್ತು ಇದನ್ನು ಮುಸ್ಲಿಮರ ಧಾರ್ಮಿಕ ನಾಯಕ (ಇಮಾಂ) ಅಥವಾ ಆಡಳಿತಗಾರ ಮಾತ್ರ ಮಾಡಬೇಕು (ಸಾಮಾನ್ಯ ಜನರಲ್ಲ).
  2. "ಯಾರು ತನ್ನ ಧರ್ಮವನ್ನು ಬದಲಿಸುತ್ತಾನೋ, ಅವನನ್ನು ಕೊಲ್ಲಿರಿ" ಎಂಬ ಮಾತಿನ ಅರ್ಥವೇನೆಂದರೆ, ಯಾರು ಇಸ್ಲಾಂನಿಂದ ಧರ್ಮಭ್ರಷ್ಟನಾಗುತ್ತಾನೋ ಅವನನ್ನು ಕೊಲ್ಲಿರಿ. ಈ ತೀರ್ಪು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯವಾಗುತ್ತದೆ.
  3. ಧರ್ಮಭ್ರಷ್ಟನನ್ನು (ಮುರ್ತದ್ದ್) ಅವನ ಧರ್ಮಭ್ರಷ್ಟತೆಯೊಂದಿಗೆ ಇರಲು ಅನುಮತಿಸಲಾಗುವುದಿಲ್ಲ. ಬದಲಿಗೆ ಅವನನ್ನು ಇಸ್ಲಾಂಗೆ ಮರಳಿ ಬರಲು ಆಹ್ವಾನಿಸಬೇಕು. ಅವನು ಒಪ್ಪದಿದ್ದರೆ, ಅವನನ್ನು ಕೊಲ್ಲಲಾಗುತ್ತದೆ.
  4. ಈ ಹದೀಸ್‌ನಲ್ಲಿ ಬೆಂಕಿಯಿಂದ ಶಿಕ್ಷಿಸುವುದರ ನಿಷೇಧವಿದೆ, ಮತ್ತು 'ಹುದೂದ್' (ದಂಡನೆ) ಗಳನ್ನು ಬೆಂಕಿಯ ಮೂಲಕ ಜಾರಿಗೊಳಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
  5. ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆ, ಮತ್ತು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹದೀಸ್‌ಗಳ ಬಗ್ಗೆ ಅವರ ಜ್ಞಾನ ಮತ್ತು ತಿಳುವಳಿಕೆಯ ವಿಸ್ತಾರವನ್ನು ತಿಳಿಸಲಾಗಿದೆ.
  6. ಭಿನ್ನಾಭಿಪ್ರಾಯ ಹೊಂದಿದವರನ್ನು ತಿದ್ದುವ ಶಿಷ್ಟಾಚಾರವನ್ನು ಇದರಲ್ಲಿ ತಿಳಿಸಲಾಗಿದೆ.
ಅನುವಾದ: ಆಂಗ್ಲ ಉರ್ದು ಇಂಡೋನೇಷಿಯನ್ ಬಂಗಾಳಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الهولندية الغوجاراتية الدرية المجرية الجورجية المقدونية الخميرية البنجابية الماراثية
ಅನುವಾದಗಳನ್ನು ತೋರಿಸಿ