عَنْ أَبِي سَعِيدٍ الْخُدْرِيِّ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ أَنَّهُ قَالَ:
«لَا يَمْنَعَنَّ رَجُلًا مِنْكُمْ مَخَافَةُ النَّاسِ أَنْ يَتَكَلَّمَ بِالْحَقِّ إِذَا رَآهُ أَوْ عَلِمَهُ».

[صحيح] - [رواه الترمذي وابن ماجه وأحمد] - [مسند أحمد: 11403]
المزيــد ...

ಅಬೂ ಸಈದ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಜನರ ಭಯವು ನಿಮ್ಮಲ್ಲಿ ಯಾರನ್ನೂ, ಸತ್ಯವನ್ನು ಕಂಡಾಗ ಅಥವಾ ತಿಳಿದಾಗ ಅದನ್ನು ಮಾತನಾಡದಂತೆ ತಡೆಯಬಾರದು".

[صحيح] - [رواه الترمذي وابن ماجه وأحمد] - [مسند أحمد - 11403]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳಿಗೆ ನೀಡಿದ ಪ್ರವಚನ ಮತ್ತು ಉಪದೇಶಗಳಲ್ಲಿ ಒಂದು ಏನೆಂದರೆ, ಜನರ ಭಯವಾಗಲಿ, ಜನರ ಬಗ್ಗೆ ಇರುವ ಭೀತಿ ಅಥವಾ ಅವರ ಶಕ್ತಿಯಾಗಲಿ, ಸತ್ಯವನ್ನು ಕಂಡಾಗ ಅಥವಾ ತಿಳಿದಾಗ ಅದನ್ನು ಹೇಳದಂತೆ ಅಥವಾ ಅದನ್ನು ಆದೇಶಿಸದಂತೆ ಮುಸ್ಲಿಮನನ್ನು ಎಂದೂ ತಡೆಯಬಾರದು.

ಹದೀಸಿನ ಪ್ರಯೋಜನಗಳು

  1. ಸತ್ಯವನ್ನು ತೆರೆದು ಹೇಳಲು ಮತ್ತು ಜನರ ಭಯದಿಂದ ಅದನ್ನು ಮುಚ್ಚಿಡದಿರಲು ಪ್ರೋತ್ಸಾಹಿಸಲಾಗಿದೆ.
  2. ಸತ್ಯವನ್ನು ಹೇಳುವುದು ಎಂದರೆ, ಅದನ್ನು ಹೇಳುವ ವಿಧಾನದಲ್ಲಿ ಶಿಷ್ಟಾಚಾರ, ವಿವೇಕ ಮತ್ತು ಉತ್ತಮ ಉಪದೇಶಕ್ಕೆ ಬದ್ಧರಾಗಿರಬಾರದು ಎಂದಲ್ಲ (ಅಂದರೆ ಸತ್ಯ ಹೇಳುವಾಗಲೂ ವಿವೇಕ ಮತ್ತು ಸೌಮ್ಯತೆ ಇರಬೇಕು).
  3. ಕೆಡುಕನ್ನು ಖಂಡಿಸುವುದು ಕಡ್ಡಾಯವಾಗಿದೆ. ಜನರ ಹಿತಾಸಕ್ತಿಗಳು ಅಲ್ಲಾಹನ ಹಕ್ಕಿಗೆ ವಿರುದ್ಧವಾಗಿದ್ದರೆ ಸರ್ವಶಕ್ತನಾದ ಅಲ್ಲಾಹನ ಹಕ್ಕಿಗೆ ಆದ್ಯತೆ ನೀಡಬೇಕು.
ಅನುವಾದ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ತುರ್ಕಿ ಸಿಂಹಳೀಯ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ ಪಶ್ತೋ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ