عَنْ جَابِرِ بْنِ عَبْدِ اللَّهِ رَضِيَ اللَّهُ عَنْهُمَا قَالَ:
كُنَّا فِي غَزَاةٍ فَكَسَعَ رَجُلٌ مِنَ المُهَاجِرِينَ رَجُلًا مِنَ الأَنْصَارِ، فَقَالَ الأَنْصَارِيُّ: يَا لَلْأَنْصَارِ، وَقَالَ المُهَاجِرِيُّ: يَا لَلْمُهَاجِرِينَ، فَسَمَّعَهَا اللَّهُ رَسُولَهُ صَلَّى اللهُ عَلَيْهِ وَسَلَّمَ قَالَ: «مَا هَذَا؟» فَقَالُوا: كَسَعَ رَجُلٌ مِنَ المُهَاجِرِينَ رَجُلًا مِنَ الأَنْصَارِ، فَقَالَ الأَنْصَارِيُّ: يَا لَلْأَنْصَارِ، وَقَالَ المُهَاجِرِيُّ: يَا لَلْمُهَاجِرِينَ، فَقَالَ النَّبِيُّ صَلَّى اللهُ عَلَيْهِ وَسَلَّمَ: «دَعُوهَا فَإِنَّهَا مُنْتِنَةٌ» قَالَ جَابِرٌ: وَكَانَتِ الأَنْصَارُ حِينَ قَدِمَ النَّبِيُّ صَلَّى اللهُ عَلَيْهِ وَسَلَّمَ أَكْثَرَ، ثُمَّ كَثُرَ المُهَاجِرُونَ بَعْدُ، فَقَالَ عَبْدُ اللَّهِ بْنُ أُبَيٍّ: أَوَقَدْ فَعَلُوا، وَاللَّهِ لَئِنْ رَجَعْنَا إِلَى المَدِينَةِ لَيُخْرِجَنَّ الأَعَزُّ مِنْهَا الأَذَلَّ، فَقَالَ عُمَرُ بْنُ الخَطَّابِ رَضِيَ اللَّهُ عَنْهُ: دَعْنِي يَا رَسُولَ اللَّهِ أَضْرِبُ عُنُقَ هَذَا المُنَافِقِ، قَالَ النَّبِيُّ صَلَّى اللهُ عَلَيْهِ وَسَلَّمَ: «دَعْهُ، لاَ يَتَحَدَّثُ النَّاسُ أَنَّ مُحَمَّدًا يَقْتُلُ أَصْحَابَهُ».
[صحيح] - [متفق عليه] - [صحيح البخاري: 4907]
المزيــد ...
ಜಾಬಿರ್ ಇಬ್ನ್ ಅಬ್ದುಲ್ಲಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
"ನಾವು ಒಂದು ಯುದ್ಧದ ಪ್ರಯಾಣದಲ್ಲಿದ್ದೆವು. ಆಗ ಮುಹಾಜಿರ್ಗಳಲ್ಲಿ ಒಬ್ಬ ವ್ಯಕ್ತಿ ಅನ್ಸಾರಿಗಳಲ್ಲಿ ಸೇರಿದ ಒಬ್ಬ ವ್ಯಕ್ತಿಯ ಪೃಷ್ಠಕ್ಕೆ (ಹಿಂಬದಿಗೆ) ಒದ್ದನು (ಅಥವಾ ಹೊಡೆದನು). ಆಗ ಅನ್ಸಾರಿ ವ್ಯಕ್ತಿ: 'ಓ ಅನ್ಸಾರಿಗಳೇ (ಸಹಾಯಕ್ಕೆ ಬನ್ನಿ)!' ಎಂದು ಕೂಗಿದನು. ಮತ್ತು ಮುಹಾಜಿರ್ ವ್ಯಕ್ತಿ: 'ಓ ಮುಹಾಜಿರ್ಗಳೇ (ಸಹಾಯಕ್ಕೆ ಬನ್ನಿ)!' ಎಂದು ಕೂಗಿದನು. ಅಲ್ಲಾಹು, ತನ್ನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದು ಕೇಳಿಸುವಂತೆ ಮಾಡಿದನು. ಆಗ ಅವರು: 'ಏನಿದು?' ಎಂದು ಕೇಳಿದರು. ಅವರು (ಜನರು) ಹೇಳಿದರು: 'ಒಬ್ಬ ಮುಹಾಜಿರ್ ಅನ್ಸಾರಿಯೊಬ್ಬನ ಪೃಷ್ಠಕ್ಕೆ ಹೊಡೆದನು. ಆಗ ಅನ್ಸಾರಿ: ಓ ಅನ್ಸಾರಿಗಳೇ! ಎಂದೂ, ಮುಹಾಜಿರ್: ಓ ಮುಹಾಜಿರ್ಗಳೇ! ಎಂದೂ ಕೂಗಿದರು'. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: 'ಅದನ್ನು (ಆ ಕರೆಯನ್ನು) ಬಿಟ್ಟುಬಿಡಿ. ಖಂಡಿತವಾಗಿಯೂ ಅದು ದುರ್ನಾತ ಬೀರುವಂತಹುದು (ಅಸಹ್ಯವಾದುದು)'." ಜಾಬಿರ್ ಹೇಳುತ್ತಾರೆ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಬಂದಾಗ ಅನ್ಸಾರಿಗಳು ಹೆಚ್ಚಿದ್ದರು. ನಂತರ ಮುಹಾಜಿರ್ಗಳ ಸಂಖ್ಯೆ ಹೆಚ್ಚಾಯಿತು. (ಈ ಘಟನೆ ನಡೆದಾಗ) ಅಬ್ದುಲ್ಲಾ ಬಿನ್ ಉಬೈ ಹೇಳಿದನು: 'ಅವರು ಹೀಗೆ ಮಾಡಿದರೇ? ಅಲ್ಲಾಹನ ಆಣೆ, ನಾವು ಮದೀನಕ್ಕೆ ಮರಳಿದರೆ, ಗೌರವವುಳ್ಳವರು ಅವಮಾನಿತರನ್ನು ಅಲ್ಲಿಂದ ಹೊರಹಾಕುತ್ತಾರೆ'. ಆಗ ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: 'ಓ ಅಲ್ಲಾಹನ ಸಂದೇಶವಾಹಕರೇ, ನನ್ನನ್ನು ಬಿಡಿ, ಈ ಮುನಾಫಿಕ್ನ (ಕಪಟವಿಶ್ವಾಸಿಯ) ಕತ್ತನ್ನು ಕಡಿಯುತ್ತೇನೆ'. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: 'ಅವನನ್ನು ಬಿಡಿ. ಮುಹಮ್ಮದ್ ತಮ್ಮ ಸಂಗಾತಿಗಳನ್ನೇ ಕೊಲ್ಲುತ್ತಾರೆ ಎಂದು ಜನ ಮಾತನಾಡಿಕೊಳ್ಳಬಾರದು'."
[صحيح] - [متفق عليه] - [صحيح البخاري - 4907]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯುದ್ಧದ ಪ್ರಯಾಣದಲ್ಲಿದ್ದರು. ಅವರೊಂದಿಗೆ ಮುಹಾಜಿರ್ ಮತ್ತು ಅನ್ಸಾರಿ ಸಂಗಾತಿಗಳಿದ್ದರು (ಅಲ್ಲಾಹು ಅವರೆಲ್ಲರ ಬಗ್ಗೆ ಸಂಪ್ರೀತನಾಗಲಿ). ಆಗ ಮುಹಾಜಿರ್ಗಳಲ್ಲಿನ ಒಬ್ಬ ವ್ಯಕ್ತಿ ಅನ್ಸಾರಿಗಳಲ್ಲಿನ ಒಬ್ಬ ವ್ಯಕ್ತಿಯ ಪೃಷ್ಠಕ್ಕೆ ತನ್ನ ಕೈಯಿಂದ ಹೊಡೆದನು. ಆಗ ಅನ್ಸಾರಿ ವ್ಯಕ್ತಿ: "ಓ ಅನ್ಸಾರಿಗಳೇ, ನನಗೆ ಸಹಾಯ ಮಾಡಿ!" ಎಂದನು. ಮುಹಾಜಿರ್ ವ್ಯಕ್ತಿ: "ಓ ಮುಹಾಜಿರ್ಗಳೇ, ನನಗೆ ಸಹಾಯ ಮಾಡಿ!" ಎಂದನು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ಕೇಳಿಸಿಕೊಂಡರು ಮತ್ತು "ಏನಿದು?" ಎಂದು ವಿಚಾರಿಸಿದರು. ಜನರು ಹೇಳಿದರು: "ಒಬ್ಬ ಮುಹಾಜಿರ್ ಅನ್ಸಾರಿಯೊಬ್ಬನ ಪೃಷ್ಠಕ್ಕೆ ಹೊಡೆದನು. ಅದಕ್ಕೆ ಅನ್ಸಾರಿ: ಓ ಅನ್ಸಾರಿಗಳೇ, ನನಗೆ ಸಹಾಯ ಮಾಡಿ ಎಂದೂ, ಮುಹಾಜಿರ್: ಓ ಮುಹಾಜಿರ್ಗಳೇ, ನನಗೆ ಸಹಾಯ ಮಾಡಿ ಎಂದೂ ಕೂಗಿದರು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಈ ಜಾಹಲಿಯ್ಯಾ (ಅಜ್ಞಾನದ) ಕಾಲದ ಅಭ್ಯಾಸವನ್ನು ಬಿಟ್ಟುಬಿಡಿ. ಖಂಡಿತವಾಗಿಯೂ ಅದು ಕೆಟ್ಟದ್ದು, ಅಸಹ್ಯಕರವಾದುದು ಮತ್ತು ಹಾನಿಕಾರಕವಾದುದು." ಜಾಹಲಿಯ್ಯಾ ಕಾಲದ ಅಭ್ಯಾಸವೇನೆಂದರೆ, ಒಬ್ಬ ವ್ಯಕ್ತಿಯ ಮೇಲೆ ಅವನ ಎದುರಾಳಿ ಮೇಲುಗೈ ಸಾಧಿಸಿದರೆ, ಅವನು (ಸೋಲುತ್ತಿರುವವನು) ತನ್ನ ಪಂಗಡದವರನ್ನು ಕರೆಯುತ್ತಿದ್ದನು. ಆಗ ಪಂಗಡದವರು ತಮ್ಮವನು ಅಕ್ರಮಿ ಆಗಿರಲಿ ಅಥವಾ ಸಂತ್ರಸ್ತ ಆಗಿರಲಿ, ಅಜ್ಞಾನ ಮತ್ತು ಪಕ್ಷಪಾತದಿಂದ ಅವನ ಸಹಾಯಕ್ಕೆ ಧಾವಿಸುತ್ತಿದ್ದರು. ಜಾಬಿರ್ ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಲಸೆ ಬಂದು ಮದೀನಕ್ಕೆ ಸೇರಿದಾಗ ಅನ್ಸಾರಿಗಳು ಹೆಚ್ಚಿದ್ದರು. ನಂತರ (ಕಾಲಕ್ರಮೇಣ) ಮುಹಾಜಿರ್ಗಳು ಹೆಚ್ಚಾದರು. ಆಗ ಕಪಟವಿಶ್ವಾಸಿಗಳ (ಮುನಾಫಿಕರ) ನಾಯಕನಾದ ಅಬ್ದುಲ್ಲಾ ಬಿನ್ ಉಬೈ ಬಿನ್ ಸಲೂಲ್ ಹೇಳಿದನು: "ವಿಷಯ ಇಲ್ಲಿಯವರೆಗೆ ಬಂತೇ?! ಅಲ್ಲಾಹನ ಆಣೆ, ನಾವು ಮದೀನಕ್ಕೆ ಮರಳಿದರೆ, ಗೌರವವುಳ್ಳವರು — ಅಂದರೆ ತಾನು ಮತ್ತು ತನ್ನ ಕಡೆಯವರು — ಅವಮಾನಿತರನ್ನು — ಅಂದರೆ ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಸಂಗಡಿಗರನ್ನು — ಅಲ್ಲಿಂದ ಹೊರಹಾಕುತ್ತಾರೆ." ಆಗ ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ನನ್ನನ್ನು ಬಿಡಿ, ಈ ಕಪಟವಿಶ್ವಾಸಿಯ ಕತ್ತನ್ನು ಕತ್ತರಿಸುತ್ತೇನೆ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವನನ್ನು ಬಿಡಿ. ಬಾಹ್ಯವಾಗಿ ನೋಡುವಾಗ ಅವನು ನನ್ನ ಅನುಯಾಯಿಯೇ ಆಗಿರುವುದರಿಂದ, ಮುಹಮ್ಮದ್ ತಮ್ಮ ಅನುಯಾಯಿಗಳನ್ನೇ ಕೊಲ್ಲುತ್ತಾರೆ ಎಂದು ಜನ ಮಾತನಾಡಿಕೊಳ್ಳಬಾರದು."