عَنْ أَنَسِ بْنِ مَالِكٍ رَضيَ اللهُ عنهُ قَالَ:
لَمَّا نَزَلَتْ: {إِنَّا فَتَحْنَا لَكَ فَتْحًا مُبِينًا لِيَغْفِرَ لَكَ اللهُ} إِلَى قَوْلِهِ {فَوْزًا عَظِيمًا} [الفتح: ١-٥] مَرْجِعَهُ مِنَ الْحُدَيْبِيَةِ، وَهُمْ يُخَالِطُهُمُ الْحُزْنُ وَالْكَآبَةُ، وَقَدْ نَحَرَ الْهَدْيَ بِالْحُدَيْبِيَةِ، فَقَالَ: «لَقَدْ أُنْزِلَتْ عَلَيَّ آيَةٌ هِيَ أَحَبُّ إِلَيَّ مِنَ الدُّنْيَا جَمِيعًا».
[صحيح] - [رواه مسلم] - [صحيح مسلم: 1786]
المزيــد ...
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಹುದೈಬಿಯ್ಯಾದಿಂದ ಹಿಂತಿರುಗುವಾಗ, “ಖಂಡಿತವಾಗಿಯೂ ನಾವು ನಿಮಗೆ ಸ್ಪಷ್ಟವಾದ ವಿಜಯವನ್ನು ನೀಡಿದ್ದೇವೆ, ಅಲ್ಲಾಹು ನಿಮ್ಮ ಹಿಂದಿನ ಮತ್ತು ಮುಂದಿನ ಪಾಪಗಳನ್ನು ಕ್ಷಮಿಸಲು..” ಎಂಬಲ್ಲಿಂದ “...ಮಹಾನ್ ವಿಜಯವಾಗಿದೆ.” [ಸೂರಃ ಅಲ್-ಫತ್ಹ್: 1-5] ಎಂಬ ವಚನಗಳು ಅವತೀರ್ಣವಾದವು. ಆಗ ಅವರ (ಸಹಾಬಿಗಳ) ಮನಸ್ಸಿನಲ್ಲಿ ದುಃಖ ಮತ್ತು ಖಿನ್ನತೆ ತುಂಬಿಕೊಂಡಿತ್ತು. ಅವರು ಹುದೈಬಿಯ್ಯಾದಲ್ಲಿಯೇ ಬಲಿ ಪ್ರಾಣಿಗಳನ್ನು ವಧೆ ಮಾಡಿದ್ದರು. ಆಗ ಅವರು (ಪ್ರವಾದಿ) ಹೇಳಿದರು: "ಖಂಡಿತವಾಗಿಯೂ ನನಗೆ ಒಂದು ಆಯತ್ (ವಚನ) ಅವತೀರ್ಣವಾಗಿದೆ, ಅದು ನನಗೆ ಇಡೀ ಪ್ರಪಂಚಕ್ಕಿಂತ ಹೆಚ್ಚು ಪ್ರಿಯವಾಗಿದೆ".
[صحيح] - [رواه مسلم] - [صحيح مسلم - 1786]
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ತಿಳಿಸುವುದೇನೆಂದರೆ: ಹುದೈಬಿಯ್ಯಾದಿಂದ ಹಿಂತಿರುಗುವ ಸಮಯದಲ್ಲಿ ಅಲ್ಲಾಹನ ಸಂದೇಶವಾಹಕರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಈ ವಚನಗಳು ಅವತೀರ್ಣವಾದವು: “ಖಂಡಿತವಾಗಿಯೂ ನಾವು ನಿಮಗೆ ಸ್ಪಷ್ಟವಾದ ವಿಜಯವನ್ನು ನೀಡಿದ್ದೇವೆ. ಅಲ್ಲಾಹು ನಿಮ್ಮ ಹಿಂದಿನ ಮತ್ತು ಮುಂದಿನ ಪಾಪಗಳನ್ನು ಕ್ಷಮಿಸಲು, ಮತ್ತು ನಿಮ್ಮ ಮೇಲೆ ತನ್ನ ಅನುಗ್ರಹವನ್ನು ಪೂರ್ಣಗೊಳಿಸಲು, ಹಾಗೂ ನಿಮಗೆ ನೇರ ಮಾರ್ಗವನ್ನು ತೋರಿಸಲು. ಮತ್ತು ಅಲ್ಲಾಹು ನಿಮಗೆ ಪ್ರಬಲವಾದ ಸಹಾಯವನ್ನು ನೀಡಲು. ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಶಾಂತಿಯನ್ನು ಇಳಿಸಿದವನು ಅವನೇ — ಅವರ ಈಮಾನ್ನೊಂದಿಗೆ (ವಿಶ್ವಾಸದೊಂದಿಗೆ) ಇನ್ನಷ್ಟು ಈಮಾನ್ ಹೆಚ್ಚಾಗಲಿ ಎಂದು. ಮತ್ತು ಆಕಾಶಗಳು ಹಾಗೂ ಭೂಮಿಯ ಸೈನ್ಯಗಳು ಅಲ್ಲಾಹನಿಗೆ ಸೇರಿವೆ. ಮತ್ತು ಅಲ್ಲಾಹು ಎಲ್ಲವನ್ನೂ ಬಲ್ಲವನು ಹಾಗೂ ವಿವೇಕಪೂರ್ಣನಾಗಿದ್ದಾನೆ. ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಮಹಿಳೆಯರನ್ನು, ತಳಭಾಗದಲ್ಲಿ ನದಿಗಳು ಹರಿಯುವ ಸ್ವರ್ಗಗಳಲ್ಲಿ ಪ್ರವೇಶಿಸುವಂತೆ ಮಾಡಲು, ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು, ಮತ್ತು ಅವರ ಪಾಪಗಳನ್ನು ಅವರಿಂದ ಅಳಿಸಿಹಾಕಲು. ಮತ್ತು ಇದು ಅಲ್ಲಾಹನ ಬಳಿ ಮಹಾನ್ ವಿಜಯವಾಗಿದೆ.”[ಸೂರ ಅಲ್-ಫತ್ಹ್: 1-5]. ಆಗ ಸಹಾಬಿಗಳ ಮನಸ್ಸಿನಲ್ಲಿ ದುಃಖ ಮತ್ತು ಖಿನ್ನತೆ ಮಿಶ್ರಿತವಾಗಿತ್ತು. ಏಕೆಂದರೆ (ಹುದೈಬಿಯ್ಯಾ) ಒಪ್ಪಂದದ ಷರತ್ತುಗಳ ಕಾರಣದಿಂದಾಗಿ ಅವರಿಗೆ ಉಮ್ರಾ ನಿರ್ವಹಿಸುವುದಕ್ಕೆ ತಡೆಯುಂಟಾಗಿತ್ತು. ಅದು ಮುಸ್ಲಿಮರ ಪರವಾಗಿಲ್ಲ ಎಂದು ಅವರು ಭಾವಿಸಿದ್ದರು. ಅವರು ಹುದೈಬಿಯ್ಯಾದಲ್ಲಿಯೇ ಬಲಿ ಪ್ರಾಣಿಗಳನ್ನು ವಧೆ ಮಾಡಿದ್ದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಖಂಡಿತವಾಗಿಯೂ ನನಗೆ ಒಂದು ಆಯತ್ ಅವತೀರ್ಣವಾಗಿದೆ. ಅದು ನನಗೆ ಇಡೀ ಪ್ರಪಂಚಕ್ಕಿಂತ ಹೆಚ್ಚು ಪ್ರಿಯವಾಗಿದೆ.” ನಂತರ ಅವರು ಅದನ್ನು ಪಠಿಸಿದರು.