عَنِ عَائِشَةَ أُمِّ المُؤْمِنين رَضيَ اللهُ عنها زَوْجَ النَّبِيِّ صَلَّى اللهُ عَلَيْهِ وَسَلَّمَ:
أَنَّ الْحَوْلَاءَ بِنْتَ تُوَيْتِ بْنِ حَبِيبِ بْنِ أَسَدِ بْنِ عَبْدِ الْعُزَّى مَرَّتْ بِهَا وَعِنْدَهَا رَسُولُ اللهِ صَلَّى اللهُ عَلَيْهِ وَسَلَّمَ، فَقُلْتُ: هَذِهِ الْحَوْلَاءُ بِنْتُ تُوَيْتٍ، وَزَعَمُوا أَنَّهَا لَا تَنَامُ اللَّيْلَ، فَقَالَ رَسُولُ اللهِ صَلَّى اللهُ عَلَيْهِ وَسَلَّمَ: «لَا تَنَامُ اللَّيْلَ! خُذُوا مِنَ الْعَمَلِ مَا تُطِيقُونَ، فَوَاللهِ لَا يَسْأَمُ اللهُ حَتَّى تَسْأَمُوا».

[صحيح] - [متفق عليه] - [صحيح مسلم: 785]
المزيــد ...

ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು:
ಹೌಲಾಅ್ ಬಿಂತ್ ತುವೈತ್ ಬಿನ್ ಹಬೀಬ್ ಬಿನ್ ಅಸದ್ ಬಿನ್ ಅಬ್ದುಲ್ ಉಝ್ಝಾ ನನ್ನ ಬಳಿಯಿಂದ ಹಾದುಹೋದರು. ಆಗ ನನ್ನೊಂದಿಗೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದ್ದರು. ನಾನು ಹೇಳಿದೆನು: "ಇವಳು ಹೌಲಾಅ್ ಬಿಂತ್ ತುವೈತ್. ಅವಳು ರಾತ್ರಿ ನಿದ್ರಿಸುವುದಿಲ್ಲವೆಂದು ಅವರು (ಜನರು) ಹೇಳುತ್ತಾರೆ". ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ರಾತ್ರಿ ನಿದ್ರಿಸುವುದಿಲ್ಲವೇ?! ನಿಮಗೆ ನಿರಂತರವಾಗಿ ಮಾಡಲು ಸಾಧ್ಯವಾಗುವಷ್ಟು ಕರ್ಮಗಳನ್ನು ಮಾತ್ರ ಮಾಡಿಕೊಳ್ಳಿರಿ. ಅಲ್ಲಾಹನಾಣೆ, ನೀವು ಬೇಸರಗೊಳ್ಳುವವರೆಗೆ ಅಲ್ಲಾಹು ಬೇಸರಗೊಳ್ಳುವುದಿಲ್ಲ."

[صحيح] - [متفق عليه] - [صحيح مسلم - 785]

ವಿವರಣೆ

ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಬಳಿಯಿಂದ ಹೌಲಾಅ್ ಬಿಂತ್ ತುವೈತ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಂದಾಗ ಅವರು ಅಲ್ಲಿಂದ ಹೊರಟರು. ಆಗ ಆಯಿಷಾ ಪ್ರವಾದಿಯವರಿಗೆ ಹೇಳಿದರು: ಈ ಮಹಿಳೆ ರಾತ್ರಿ ನಿದ್ರಿಸುವುದಿಲ್ಲ, ಬದಲಿಗೆ ರಾತ್ರಿಯನ್ನು ನಮಾಝ್‌ನಿಂದ ಜೀವಂತವಾಗಿಡುತ್ತಾಳೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವಳು ತನ್ನ ಮೇಲೆ ತಾನೇ ಕಠಿಣತೆಯನ್ನು ವಿಧಿಸಿದ್ದನ್ನು ಖಂಡಿಸುತ್ತಾ ಹೇಳಿದರು: ರಾತ್ರಿ ನಿದ್ರಿಸುವುದಿಲ್ಲವೇ! ನಿಮಗೆ ನಿರಂತರವಾಗಿ ಮಾಡಲು ಸಾಧ್ಯವಿರುವ ಕರ್ಮಗಳನ್ನೇ ಮಾಡಿರಿ. ಅಲ್ಲಾಹನಾಣೆ, ಅಲ್ಲಾಹು ತನ್ನ ವಿಧೇಯರಾದ ಸಜ್ಜನ ದಾಸರಿಗೆ ಅವರ ವಿಧೇಯತೆ, ಸತ್ಕರ್ಮಗಳು ಮತ್ತು ಒಳಿತಿನ ಕಾರ್ಯಗಳಿಗೆ ಪ್ರತಿಫಲ ಮತ್ತು ಪುಣ್ಯವನ್ನು ನೀಡುವುದರಲ್ಲಿ ಬೇಸರಗೊಳ್ಳುವುದಿಲ್ಲ, ಎಲ್ಲಿಯವರೆಗೆ ಎಂದರೆ ಅವರು (ದಾಸರು) ಬೇಸರಗೊಂಡು ಕರ್ಮವನ್ನು ಬಿಟ್ಟುಬಿಡುವವರೆಗೆ.

ಹದೀಸಿನ ಪ್ರಯೋಜನಗಳು

  1. ದೇಹಕ್ಕೆ ಸಾಧ್ಯವಾಗುವುದಕ್ಕಿಂತ ಹೆಚ್ಚು ಆರಾಧನೆ ಮಾಡುವುದು ಬೇಸರ ಮತ್ತು ಆಲಸ್ಯಕ್ಕೆ ಕಾರಣವಾಗುತ್ತದೆ. ಆಗ ಮನಸ್ಸು ಅದನ್ನು ತ್ಯಜಿಸುತ್ತದೆ.
  2. ಆರಾಧನೆಯನ್ನು ನಿರ್ವಹಿಸುವುದರಲ್ಲಿ ಮಧ್ಯಮ ಮಾರ್ಗ ಮತ್ತು ಸಮತೋಲನವನ್ನು ಪಾಲಿಸುವುದರಿಂದ, ಅದನ್ನು ಮುಂದುವರಿಸಲು ಮತ್ತು ಅದರ ಮೇಲೆ ಸ್ಥಿರವಾಗಿರಲು ಸಾಧ್ಯವಾಗುತ್ತದೆ.
  3. ಸ್ವಲ್ಪ ಮತ್ತು ನಿರಂತರವಾದ ಕರ್ಮವು, ಹೆಚ್ಚು ಮತ್ತು ನಿಂತುಹೋಗುವ ಕರ್ಮಕ್ಕಿಂತ ಉತ್ತಮವಾಗಿದೆ.
  4. ಇಮಾಮ್ ನವವಿ ಹೇಳುತ್ತಾರೆ: "ಸ್ವಲ್ಪ (ಕರ್ಮ) ವನ್ನು ನಿರಂತರವಾಗಿ ಮಾಡುವುದರಿಂದ, ಸ್ಮರಣೆ, ಜಾಗರೂಕತೆ, ನಿಷ್ಕಳಂಕತೆ ಮತ್ತು ಅಲ್ಲಾಹನ ಕಡೆಗೆ ಒಲವನ್ನು ಕೂಡಿದ ವಿಧೇಯತೆಯು ಮುಂದುವರಿಯುತ್ತದೆ. ಇದು ಕಷ್ಟಕರವಾದ ಹೆಚ್ಚು (ಕರ್ಮ) ಕ್ಕೆ ವಿರುದ್ಧವಾಗಿದೆ. ಎಷ್ಟರಮಟ್ಟಿಗೆ ಎಂದರೆ, ನಿರಂತರವಾದ ಸ್ವಲ್ಪ (ಕರ್ಮ) ವು, ನಿಂತುಹೋಗುವ ಹೆಚ್ಚು (ಕರ್ಮ) ಕ್ಕಿಂತ ಅನೇಕ ಪಟ್ಟು ಹೆಚ್ಚಾಗಿ ಬೆಳೆಯುತ್ತದೆ."
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ತುರ್ಕಿ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الجورجية المقدونية الخميرية البنجابية الماراثية
ಅನುವಾದಗಳನ್ನು ತೋರಿಸಿ