عَن ابنِ عباسٍ رضي الله عنهما أنَّ رسولَ اللهِ صلي الله عليه وسلم قال:
«لَو يُعطَى النّاسُ بدَعواهُم لادَّعَى رِجالٌ أموالَ قَومٍ ودِماءَهُم، لَكِنَّ البَيِّنَةَ على المُدَّعِى، واليَمينَ على مَن أنكَرَ».
[حسن] - [رواه البيهقي، وغيره هكذا، وبعضه في الصحيحين] - [الأربعون النووية: 33]
المزيــد ...
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಒಂದು ವೇಳೆ ಜನರಿಗೆ ಅವರ ದಾವೆಗಳ (ಹೇಳಿಕೆಗಳ) ಆಧಾರದ ಮೇಲೆ (ಅವರು ಕೇಳಿದ್ದನ್ನು) ನೀಡಲಾಗುತ್ತಿದ್ದರೆ, ಖಂಡಿತವಾಗಿಯೂ ಕೆಲವರು ಇತರರ ಸಂಪತ್ತು ಮತ್ತು ರಕ್ತಕ್ಕಾಗಿ (ಅನ್ಯಾಯವಾಗಿ) ದಾವೆ ಮಾಡುತ್ತಿದ್ದರು. ಆದರೆ, ಪುರಾವೆಯು ದಾವೆ ಮಾಡುವವನ ಮೇಲಿದೆ, ಮತ್ತು ಪ್ರಮಾಣವು ನಿರಾಕರಿಸುವವನ ಮೇಲಿದೆ".
[حسن] - [رواه البيهقي وغيره هكذا وبعضه في الصحيحين] - [الأربعون النووية - 33]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾವುದೇ ಪುರಾವೆ ಅಥವಾ ಆಧಾರವಿಲ್ಲದೆ ಕೇವಲ ಜನರ ಹಕ್ಕೊತ್ತಾಯಗಳಿಗೆ ಅನುಗುಣವಾಗಿ ಅವರಿಗೆ ನೀಡಲಾಗುತ್ತಿದ್ದರೆ, ಜನರು ಇತರರ ಸಂಪತ್ತು ಮತ್ತು ಜೀವಗಳಿಗಾಗಿ ಹಕ್ಕೊತ್ತಾಯ ಮಾಡುತ್ತಿದ್ದರು. ಆದರೆ, ಫಿರ್ಯಾದಿ ತನ್ನ ವಾದಕ್ಕೆ ಆಧಾರವಾಗಿ ಪುರಾವೆ ಒದಗಿಸುವುದು ಕಡ್ಡಾಯವಾಗಿದೆ. ಅವನಲ್ಲಿ ಯಾವುದೇ ಪುರಾವೆ ಇಲ್ಲದಿದ್ದರೆ, ಹಕ್ಕೊತ್ತಾಯವನ್ನು ಪ್ರತಿವಾದಿಯ ಮುಂದೆ ಪ್ರದರ್ಶಿಸಲಾಗುತ್ತದೆ. ಅವನು ಅದನ್ನು ನಿರಾಕರಿಸುವುದಾದರೆ ಪ್ರಮಾಣ ಮಾಡಬೇಕಾಗುತ್ತದೆ. ಅದರ ನಂತರವೇ ಅವನನ್ನು ವಿಮುಕ್ತಗೊಳಿಸಲಾಗುತ್ತದೆ.