عَنْ أَنَسِ بْنِ مَالِكٍ رَضيَ اللهُ عنه عَنِ النَّبِيِّ صَلَّى اللهُ عَلَيْهِ وَسَلَّمَ أَنَّهُ قَالَ:
«اللهُمَّ لَا عَيْشَ إِلَّا عَيْشُ الْآخِرَهْ، فَاغْفِرْ لِلْأَنْصَارِ وَالْمُهَاجِرَهْ».
[صحيح] - [متفق عليه] - [صحيح مسلم: 1805]
المزيــد ...
ಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದರು:
"ಓ ಅಲ್ಲಾಹನೇ, ಪರಲೋಕದ ಜೀವನವನ್ನು ಹೊರತುಪಡಿಸಿ ಬೇರೆ (ನೈಜ) ಜೀವನವಿಲ್ಲ. ಆದ್ದರಿಂದ, ಅನ್ಸಾರ್ಗಳನ್ನು ಮತ್ತು ಮುಹಾಜಿರ್ಗಳನ್ನು ಕ್ಷಮಿಸು".
[صحيح] - [متفق عليه] - [صحيح مسلم - 1805]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅಲ್ಲಾಹನ ಸಂತೃಪ್ತಿ, ಕರುಣೆ ಮತ್ತು ಸ್ವರ್ಗದಲ್ಲಿರುವ ಪರಲೋಕದ ಜೀವನವನ್ನು ಹೊರತುಪಡಿಸಿ ಬೇರೆ ನೈಜ ಜೀವನವಿಲ್ಲ; ಏಕೆಂದರೆ ಈ ಪ್ರಪಂಚದ ಜೀವನವು ನಶ್ವರವಾಗಿದೆ, ಮತ್ತು ಪರಲೋಕದ ಜೀವನವೇ ಶಾಶ್ವತ ಮತ್ತು ಚಿರಸ್ಥಾಯಿಯಾಗಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಮತ್ತು ಮುಹಾಜಿರ್ಗಳಿಗೆ ಆಶ್ರಯ ನೀಡಿದ, ಅವರಿಗೆ ಸಹಾಯ ಮಾಡಿದ, ಮತ್ತು ತಮ್ಮ ಸಂಪತ್ತನ್ನು ಅವರೊಂದಿಗೆ ಹಂಚಿಕೊಂಡ ಅನ್ಸಾರ್ಗಳಿಗಾಗಿ, ಮತ್ತು ಅಲ್ಲಾಹನ ಅನುಗ್ರಹ ಮತ್ತು ಸಂತೃಪ್ತಿಯನ್ನು ಬಯಸಿ ತಮ್ಮ ಮನೆ ಹಾಗೂ ಸಂಪತ್ತನ್ನು ತೊರೆದ ಮುಹಾಜಿರ್ಗಳಿಗಾಗಿ ಕ್ಷಮೆ, ಗೌರವ ಮತ್ತು ಸದ್ಗುಣಕ್ಕಾಗಿ ಪ್ರಾರ್ಥಿಸಿದರು.