+ -

عن جابر رضي الله عنهما قال: قال رسول الله صلى الله عليه وسلم:
«لن يدخلَ النارَ رجلٌ شَهِد بدرًا والحُدَيْبِيَة».

[صحيح] - [رواه أحمد، وأصله في صحيح مسلم] - [مسند أحمد: 15262]
المزيــد ...

ಜಾಬಿರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಬದ್ರ್ (ಯುದ್ಧ) ದಲ್ಲಿ ಮತ್ತು ಹುದೈಬಿಯ್ಯ (ಒಪ್ಪಂದ) ದಲ್ಲಿ ಭಾಗವಹಿಸಿದ ವ್ಯಕ್ತಿಯು ಖಂಡಿತವಾಗಿಯೂ ನರಕವನ್ನು ಪ್ರವೇಶಿಸುವುದಿಲ್ಲ".

[صحيح] - [رواه أحمد وأصله في صحيح مسلم] - [مسند أحمد - 15262]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಹಿಜರಿ ಎರಡನೇ ವರ್ಷದಲ್ಲಿ ನಡೆದ ಬದ್ರ್ ಯುದ್ಧದಲ್ಲಿ ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೋರಾಡಿದವರಾಗಲಿ, ಅಥವಾ ಹಿಜರಿ ಆರನೇ ವರ್ಷದಲ್ಲಿ ನಡೆದ ಹುದೈಬಿಯ್ಯ ಒಪ್ಪಂದ – ಇದರಲ್ಲಿ 'ಬೈಅತು ರ್ರಿದ್ವಾನ್' ಸಹ ಸೇರಿದೆ – ದಲ್ಲಿ ಹಾಜರಿದ್ದವರಾಗಲಿ ನರಕವನ್ನು ಪ್ರವೇಶಿಸುವುದಿಲ್ಲ.

ಹದೀಸಿನ ಪ್ರಯೋಜನಗಳು

  1. ಬದ್ರ್ ಮತ್ತು ಹುದೈಬಿಯ್ಯದಲ್ಲಿ ಭಾಗವಹಿಸಿದವರಿಗೆ ಶ್ರೇಷ್ಠತೆಯಿದೆ, ಮತ್ತು ಅವರು ನರಕವನ್ನು ಪ್ರವೇಶಿಸುವುದಿಲ್ಲ ಎಂಬುದು ಖಾತ್ರಿಯಾಗಿದೆ ಎಂದು ಇದರಲ್ಲಿ ತಿಳಿಸಲಾಗಿದೆ.
  2. ಅಲ್ಲಾಹು ಅವರಿಂದ (ಇತರರಿಗೆ) ಆಗಿರಬಹುದಾದ ಅನ್ಯಾಯಗಳಿಗೆ ಹೊಣೆಗಾರನಾಗುತ್ತಾನೆ (ಅಂದರೆ, ಅವನು ಅವುಗಳನ್ನು ಪರಿಹರಿಸುತ್ತಾನೆ), ಅವರಿಗೆ ಈಮಾನ್ (ವಿಶ್ವಾಸ) ದ ಮೇಲೆ ಮರಣ ಹೊಂದುವ ಸೌಭಾಗ್ಯವನ್ನು ನೀಡುತ್ತಾನೆ, ಮತ್ತು ನರಕದ ಶಿಕ್ಷೆಯನ್ನು ಅನುಭವಿಸುವ ಮೊದಲೇ ಅವರನ್ನು ಸ್ವರ್ಗಕ್ಕೆ ಸೇರಿಸುತ್ತಾನೆ ಎಂದು ವಿವರಿಸಲಾಗಿದೆ. ಇದು ಅಲ್ಲಾಹನ ಅನುಗ್ರಹವಾಗಿದೆ. ಅವನು ತಾನಿಚ್ಛಿಸಿದವರಿಗೆ ಅದನ್ನು ನೀಡುತ್ತಾನೆ. ಅಲ್ಲಾಹು ಮಹಾನ್ ಅನುಗ್ರಹಪೂರ್ಣನಾಗಿದ್ದಾನೆ.
ಅನುವಾದ: ಆಂಗ್ಲ ಉರ್ದು ಸ್ಪ್ಯಾನಿಷ್ ಇಂಡೋನೇಷಿಯನ್ ಉಯ್ಘರ್ ಬಂಗಾಳಿ ಫ್ರೆಂಚ್ ರಷ್ಯನ್ ಬೊಸ್ನಿಯನ್ ಸಿಂಹಳೀಯ ಹಿಂದಿ ಚೀನೀ ಪರ್ಷಿಯನ್ ವಿಯೆಟ್ನಾಮೀಸ್ ಟ್ಯಾಗಲಾಗ್ ಕುರ್ದಿಷ್ ಹೌಸಾ ಪೋರ್ಚುಗೀಸ್ ಮಲಯಾಳಂ ತೆಲುಗು ಸ್ವಾಹಿಲಿ ಥಾಯ್ الأسامية الأمهرية الهولندية الغوجاراتية الدرية الرومانية المجرية الموري الأوكرانية الجورجية المقدونية الخميرية الماراثية
ಅನುವಾದಗಳನ್ನು ತೋರಿಸಿ
ಇನ್ನಷ್ಟು