عَنْ أَبِي هُرَيْرَةَ رضي الله عنه قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ:
«قَارِبُوا وَسَدِّدُوا، وَاعْلَمُوا أَنَّهُ لَنْ يَنْجُوَ أَحَدٌ مِنْكُمْ بِعَمَلِهِ» قَالُوا: يَا رَسُولَ اللهِ وَلَا أَنْتَ؟ قَالَ: «وَلَا أَنَا، إِلَّا أَنْ يَتَغَمَّدَنِيَ اللهُ بِرَحْمَةٍ مِنْهُ وَفَضْلٍ».
[صحيح] - [متفق عليه] - [صحيح مسلم: 2816]
المزيــد ...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಸರಿಯಾದ ಮಾರ್ಗವನ್ನು ಅನುಸರಿಸಿ ಮತ್ತು ಸಾಧ್ಯವಾದಷ್ಟು ಹತ್ತಿರವಾಗಿರಿ, ಮತ್ತು ನಿಮ್ಮಲ್ಲಿ ಯಾರೂ ತಮ್ಮ ಕರ್ಮಗಳಿಂದಾಗಿ ಮೋಕ್ಷ ಪಡೆಯುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ." ಅವರು (ಅನುಯಾಯಿಗಳು) ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನೀವು ಕೂಡ ಪಡೆಯುವುದಿಲ್ಲವೇ?" ಅವರು ಉತ್ತರಿಸಿದರು: "ನಾನೂ ಕೂಡ ಪಡೆಯುವುದಿಲ್ಲ, ಅಲ್ಲಾಹು ತನ್ನ ಕರುಣೆ ಮತ್ತು ಅನುಗ್ರಹದಿಂದ ನನ್ನನ್ನು ಆವರಿಸಿಕೊಳ್ಳುವ ಹೊರತು."
[صحيح] - [متفق عليه] - [صحيح مسلم - 2816]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಸಂಗಡಿಗರಿಗೆ ಸತ್ಕರ್ಮಗಳನ್ನು ಮಾಡಲು ಮತ್ತು ಅತಿರೇಕವಾಗಲೀ ಅಥವಾ ನಿರ್ಲಕ್ಷ್ಯವಾಗಲೀ ಇಲ್ಲದೆ ಸಾಧ್ಯವಾದಷ್ಟು ಅಲ್ಲಾಹನನ್ನು ಭಯಪಡಲು ಪ್ರೋತ್ಸಾಹಿಸುತ್ತಿದ್ದಾರೆ. ಹಾಗೆಯೇ, ಅವರ ಕರ್ಮಗಳು ಸ್ವೀಕಾರವಾಗಿ ಅವರ ಮೇಲೆ ಅಲ್ಲಾಹನ ದಯೆ ವರ್ಷಿಸುವಂತಾಗಲು ಅವರು ಅಲ್ಲಾಹನಿಗೆ ಸಂಪೂರ್ಣ ನಿಷ್ಕಳಂಕರಾಗಿ ಮತ್ತು ಸುನ್ನತ್ಗೆ ಅನುಗುಣವಾಗಿ ತಮ್ಮ ಕರ್ಮಗಳನ್ನು ಸರಿಪಡಿಸಬೇಕೆಂದು ಪ್ರೋತ್ಸಾಹಿಸುತ್ತಿದ್ದಾರೆ.
ನಂತರ ಅವರು ತಿಳಿಸುವುದೇನೆಂದರೆ, ನಿಮ್ಮಲ್ಲಿ ಯಾರೂ ತಮ್ಮ ಕರ್ಮಗಳಿಂದ ಮಾತ್ರ ಮೋಕ್ಷ ಪಡೆಯುವುದಿಲ್ಲ. ಬದಲಿಗೆ, ಮೋಕ್ಷ ಪಡೆಯಬೇಕಾದರೆ ಅಲ್ಲಾಹನ ಕರುಣೆ ಇರಬೇಕಾದುದು ಅತ್ಯಗತ್ಯವಾಗಿದೆ.
ಅವರು (ಅನುಯಾಯಿಗಳು) ಕೇಳಿದರು: ಓ ಅಲ್ಲಾಹನ ಸಂದೇಶವಾಹಕರೇ! ನಿಮ್ಮ ಕರ್ಮಗಳು ಅತಿಮಹತ್ವವುಳ್ಳದ್ದಾಗಿದ್ದೂ ಸಹ ನೀವು ಕೂಡ ಅವುಗಳಿಂದ ಮೋಕ್ಷ ಪಡೆಯುವುದಿಲ್ಲವೇ?
ಅವರು ಉತ್ತರಿಸಿದರು: ನಾನು ಕೂಡ ಮೋಕ್ಷ ಪಡೆಯುವುದಿಲ್ಲ. ಅಲ್ಲಾಹು ತನ್ನ ಕರುಣೆಯಿಂದ ನನ್ನನ್ನು ಮುಚ್ಚಿಬಿಡುವ ಹೊರತು.