عَنْ أَبِي هُرَيْرَةَ رَضِيَ اللَّهُ عَنْهُ عَنِ النَّبِيِّ صَلَّى اللهُ عَلَيْهِ وَسَلَّمَ قَالَ:
«قَالَ اللَّهُ تَعَالَى: ثَلاَثَةٌ أَنَا خَصْمُهُمْ يَوْمَ القِيَامَةِ: رَجُلٌ أَعْطَى بِي ثُمَّ غَدَرَ، وَرَجُلٌ بَاعَ حُرًّا فَأَكَلَ ثَمَنَهُ، وَرَجُلٌ اسْتَأْجَرَ أَجِيرًا فَاسْتَوْفَى مِنْهُ وَلَمْ يُعْطِهِ أَجْرَهُ».

[صحيح] - [رواه البخاري] - [صحيح البخاري: 2270]
المزيــد ...

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಅಲ್ಲಾಹು ಹೇಳುತ್ತಾನೆ: ಪುನರುತ್ಥಾನದ ದಿನ ಮೂರು ವಿಧದ ಜನರ ವಿರುದ್ಧ ನಾನು ಎದುರಾಳಿಯಾಗುತ್ತೇನೆ: ನನ್ನ ಹೆಸರಿನಲ್ಲಿ ಪ್ರಮಾಣ ಮಾಡಿ (ಒಪ್ಪಂದ ಮಾಡಿಕೊಂಡು) ನಂತರ ದ್ರೋಹ ಮಾಡಿದವನು; ಸ್ವತಂತ್ರ ವ್ಯಕ್ತಿಯನ್ನು ಮಾರಿ ಆ ಹಣವನ್ನು ತಿಂದವನು; ಮತ್ತು ಒಬ್ಬ ಕೂಲಿಕಾರನನ್ನು ಕೆಲಸಕ್ಕೆ ನೇಮಿಸಿಕೊಂಡು, ಅವನಿಂದ ಪೂರ್ತಿ ಕೆಲಸ ಮಾಡಿಸಿಕೊಂಡು, ನಂತರ ಅವನ ಕೂಲಿಯನ್ನು ನೀಡದವನು."

[صحيح] - [رواه البخاري] - [صحيح البخاري - 2270]

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಹೀಗೆ ಹೇಳುತ್ತಾನೆ: "ಪುನರುತ್ಥಾನದ ದಿನ ಮೂರು ಬಗೆಯ ಜನರ ವಿರುದ್ಧ ನಾನು ಎದುರಾಳಿಯಾಗುತ್ತೇನೆ. ನಾನು ಯಾರಿಗೆ ಎದುರಾಳಿಯಾಗುತ್ತೇನೋ, ಅವರನ್ನು ನಾನು (ನನ್ನ ವಾದದಿಂದ) ಸೋಲಿಸುತ್ತೇನೆ." ಮೊದಲನೆಯವನು: (ಅಲ್ಲಾಹನ ಹೆಸರಿನಲ್ಲಿ) ಪ್ರಮಾಣ ಮಾಡಿ ವಾಗ್ದಾನ ನೀಡಿ, ನಂತರ ಆ ಒಪ್ಪಂದವನ್ನು ಮುರಿದು ದ್ರೋಹ ಎಸಗಿದವನು. ಎರಡನೆಯವನು: ಒಬ್ಬ ಸ್ವತಂತ್ರ ವ್ಯಕ್ತಿಯನ್ನು ಗುಲಾಮನೆಂದು ಸುಳ್ಳು ಹೇಳಿ ಮಾರಿ, ಆ ಹಣವನ್ನು ತಿಂದು, ಅದನ್ನು ಬಳಸಿಕೊಂಡವನು. ಮೂರನೆಯವನು: ಕೆಲಸಕ್ಕಾಗಿ ಒಬ್ಬ ಕೂಲಿಕಾರನನ್ನು ನೇಮಿಸಿಕೊಂಡು, ಅವನಿಂದ ಪೂರ್ತಿ ಕೆಲಸವನ್ನು ಪಡೆದುಕೊಂಡು, ಅವನ ಕೆಲಸದ ಕೂಲಿಯನ್ನು ನೀಡದವನು.

ಹದೀಸಿನ ಪ್ರಯೋಜನಗಳು

  1. ಈ ಹದೀಸ್ ಅನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಿಂದ ವರದಿ ಮಾಡಿದ್ದಾರೆ. ಇದನ್ನು 'ಹದೀಸ್ ಕುದ್ಸಿ' ಅಥವಾ 'ಇಲಾಹಿ' ಎಂದು ಕರೆಯಲಾಗುತ್ತದೆ. ಇದರ ಪದಗಳು ಮತ್ತು ಅರ್ಥ ಅಲ್ಲಾಹನಿಂದಲೇ ಬಂದಿರುತ್ತವೆ. ಆದರೆ ಕುರ್‌ಆನ್‌ಗೆ ಇರುವ ವಿಶೇಷತೆಗಳು (ಉದಾಹರಣೆಗೆ: ಪಠಿಸುವುದೇ ಆರಾಧನೆಯಾಗಿರುವುದು, ಶುದ್ಧಿಯೊಂದಿಗೆ ಮುಟ್ಟುವುದು, ಪವಾಡ ಸದೃಶವಾಗಿರುವುದು ಇತ್ಯಾದಿ) ಇದಕ್ಕೆ ಇರುವುದಿಲ್ಲ.
  2. ಅಸ್ಸಿಂದಿ ಹೇಳುತ್ತಾರೆ: "ಮೂವರು ಎಂದು ಇಲ್ಲಿ ಉಲ್ಲೇಖಿಸಿರುವುದು ಕೇವಲ ಇವರಿಗಷ್ಟೇ ಸೀಮಿತ ಎಂದಲ್ಲ. ಏಕೆಂದರೆ ಅಲ್ಲಾಹು ಎಲ್ಲಾ ಅಕ್ರಮಿಗಳಿಗೂ ಎದುರಾಳಿಯಾಗಿದ್ದಾನೆ. ಆದರೆ ಈ ಮೂವರು ಎಸಗುವ ಪಾಪದ ಗಂಭೀರತೆಯನ್ನು (ತೀವ್ರತೆಯನ್ನು) ತಿಳಿಸಲು ಹೀಗೆ ಹೇಳಲಾಗಿದೆ."
  3. ಇಬ್ನುಲ್-ಜೌಝಿ ಹೇಳುತ್ತಾರೆ: "ಸ್ವತಂತ್ರ ವ್ಯಕ್ತಿಯು ಅಲ್ಲಾಹನ ದಾಸನಾಗಿರುತ್ತಾನೆ. ಯಾರು ಅವನ ಮೇಲೆ ದೌರ್ಜನ್ಯ ಎಸಗುತ್ತಾನೋ, ಅವನ ಯಜಮಾನನಾದ ಅಲ್ಲಾಹು ಅವನಿಗೆ ಎದುರಾಳಿಯಾಗುತ್ತಾನೆ."
  4. ಅಲ್-ಖತ್ತಾಬಿ ಹೇಳುತ್ತಾರೆ: "ಸ್ವತಂತ್ರ ವ್ಯಕ್ತಿಯನ್ನು ಗುಲಾಮನನ್ನಾಗಿ ಮಾಡುವುದು ಎರಡು ರೀತಿಯಲ್ಲಿ ಸಂಭವಿಸುತ್ತದೆ: 1. ಗುಲಾಮನೊಬ್ಬನಿಗೆ ಬಿಡುಗಡೆ ನೀಡಿ (ಸ್ವತಂತ್ರಗೊಳಿಸಿ), ನಂತರ ಅದನ್ನು ಮುಚ್ಚಿಡುವುದು ಅಥವಾ ನಿರಾಕರಿಸುವುದು. 2. ಬಿಡುಗಡೆ ನೀಡಿದ ನಂತರವೂ ಬಲವಂತವಾಗಿ ಅವನಿಂದ ಗುಲಾಮಗಿರಿ ಮಾಡಿಸಿಕೊಳ್ಳುವುದು. ಇವುಗಳಲ್ಲಿ ಮೊದಲನೆಯದು ಅತ್ಯಂತ ಕೆಟ್ಟದ್ದಾಗಿದೆ." ನಾನು ಹೇಳುತ್ತೇನೆ: ಈ ಹದೀಸ್‌ನಲ್ಲಿ ಬಂದಿರುವ ವಿಷಯವು ಅಲ್-ಖತ್ತಾಬಿ ಹೇಳಿರುವುದಕ್ಕಿಂತಲೂ ಹೆಚ್ಚು ಗಂಭೀರವಾದುದಾಗಿದೆ. ಏಕೆಂದರೆ ಇದರಲ್ಲಿ ಬಿಡುಗಡೆ ನೀಡಿದ್ದನ್ನು ಮುಚ್ಚಿಡುವುದರ ಜೊತೆಗೆ, ಅವನನ್ನು ಮಾರಾಟ ಮಾಡಿ ಆ ಹಣವನ್ನು ತಿನ್ನುವುದು ಸೇರಿದೆ. ಆದ್ದರಿಂದ ಇದರಲ್ಲಿರುವ ಬೆದರಿಕೆ ಅತ್ಯಂತ ಕಠಿಣವಾದುದಾಗಿದೆ.
ಅನುವಾದಗಳನ್ನು ತೋರಿಸಿ
ಭಾಷೆ: ಆಂಗ್ಲ ಇಂಡೋನೇಷಿಯನ್ ಬಂಗಾಳಿ ಇನ್ನಷ್ಟು (24)
ಇನ್ನಷ್ಟು