عَنْ أَبِي هُرَيْرَةَ رَضِيَ اللَّهُ عَنْهُ قَالَ: قَالَ النَّبِيُّ صَلَّى اللهُ عَلَيْهِ وَسَلَّمَ:
«مَا مِنَ الأَنْبِيَاءِ نَبِيٌّ إِلَّا أُعْطِيَ مَا مِثْلهُ آمَنَ عَلَيْهِ البَشَرُ، وَإِنَّمَا كَانَ الَّذِي أُوتِيتُ وَحْيًا أَوْحَاهُ اللَّهُ إِلَيَّ، فَأَرْجُو أَنْ أَكُونَ أَكْثَرَهُمْ تَابِعًا يَوْمَ القِيَامَةِ».
[صحيح] - [متفق عليه] - [صحيح البخاري: 4981]
المزيــد ...
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವುದೇ ಪ್ರವಾದಿಯಿದ್ದರೂ, ಮನುಷ್ಯರು ಅವರ ಮೇಲೆ ವಿಶ್ವಾಸವಿಡುವಂತಹ ಪವಾಡಗಳನ್ನು (ದೃಷ್ಟಾಂತಗಳನ್ನು) ಅವರಿಗೆ ನೀಡಲಾಗಿತ್ತು. ಆದರೆ ನನಗೆ ನೀಡಲಾಗಿರುವುದು, ಅಲ್ಲಾಹು ನನಗೆ ಅವತೀರ್ಣಗೊಳಿಸಿದ ದಿವ್ಯವಾಣಿಯಾಗಿದೆ (ಕುರ್ಆನ್). ಆದಕಾರಣ, ಪುನರುತ್ಥಾನ ದಿನದಂದು ಅವರ ಪೈಕಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವವನು ನಾನಾಗಬೇಕು ಎಂದು ನಾನು ಆಶಿಸುತ್ತೇನೆ".
[صحيح] - [متفق عليه] - [صحيح البخاري - 4981]
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿರುವುದೇನೆಂದರೆ, ಅಲ್ಲಾಹು ಎಲ್ಲಾ ಪ್ರವಾದಿಗಳನ್ನು ಬೆಂಬಲಿಸಿದನು ಮತ್ತು ಅವರಿಗೆ ದೃಷ್ಟಾಂತಗಳನ್ನು ಹಾಗೂ ಪವಾಡಗಳನ್ನು ನೀಡಿದನು. ಅದನ್ನು ನೋಡಿದವರು ಪ್ರವಾದಿಗಳ ಸತ್ಯಸಂಧತೆಯಲ್ಲಿ ವಿಶ್ವಾಸವಿಡುವಂತಾಗಿತ್ತು. ಅವುಗಳನ್ನು ಯಾರೂ ಸೋಲಿಸಲು ಅಥವಾ ತಡೆಯಲು ಸಾಧ್ಯವಿರಲಿಲ್ಲ. ಆದರೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೀಡಲಾದ ವಿಶೇಷ ದೃಷ್ಟಾಂತ ಮತ್ತು ಪವಾಡವು ಕುರ್ಆನ್ ಆಗಿದೆ. ಇದನ್ನು ಅಲ್ಲಾಹು ಅವರಿಗೆ ದಿವ್ಯವಾಣಿಯ ಮೂಲಕ ನೀಡಿದ್ದಾನೆ. ಇದು ಸ್ಪಷ್ಟವಾದ ಮತ್ತು ಶಾಶ್ವತವಾದ ಪವಾಡವಾಗಿದ್ದು, ಇದರ ಪ್ರಯೋಜನಗಳು ಅಪಾರವಾಗಿವೆ ಮತ್ತು ಸಾರ್ವತ್ರಿಕವಾಗಿವೆ. ಇದು ಧರ್ಮಪ್ರಚಾರ, ಸಾಕ್ಷ್ಯ ಮತ್ತು ಭವಿಷ್ಯದಲ್ಲಿ ಸಂಭವಿಸುವ ಸಂಗತಿಗಳನ್ನು ಒಳಗೊಂಡಿದೆ. ಇದರ ಪ್ರಯೋಜನವು ಜೀವಂತವಿರುವವರಿಗೆ, ಇಲ್ಲದವವರಿಗೆ ಮತ್ತು ಮುಂದೆ ಹುಟ್ಟಲಿರುವವರಿಗೂ ದೊರೆಯುತ್ತದೆ. ನಂತರ ಅವರು ಹೇಳಿದರು: "ಆದ್ದರಿಂದ ತೀರ್ಪು ನೀಡುವ ದಿನದಂದು ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವವನು ನಾನಾಗುವೆನೆಂದು ಆಶಿಸುತ್ತೇನೆ."